- Advertisement -
- Advertisement -




ಕಾರ್ಕಳ: ಟಿಪ್ಪರನ್ನು ಅದರ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಟಿಪ್ಪರ್ ದ್ವಿಚಕ್ರ ವಾಹನದ ಮೇಲೆ ಚಲಿಸಿ ದ್ವಿಚಕ್ರ ವಾಹನ ಜಖಂಗೊಂಡ ಘಟನೆ ಮುಲ್ಲಡ್ಕ ಗ್ರಾಮದಲ್ಲಿ ನಡೆದಿದೆ.
ಸೋಮನಾಥ ಎಂಬವರು ದ್ವಿಚಕ್ರ ವಾಹನ ವನ್ನು ಸಂಕಲಕರಿಯ ಕಡೆಯಿಂದ ಮುಲ್ಲಡ್ಕದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಅದೇ ದಾರಿಯಲ್ಲಿ ಮುಂಡೂರಿನಿಂದ ಮುಲ್ಲಡ್ಕ ಕಡೆಗೆ ಟಿಪ್ಪರ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸೋಮನಾಥರವರು ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -