Saturday, June 28, 2025
spot_imgspot_img
spot_imgspot_img

ಎರುಂಬು: ಸಂಸ್ಕಾರ ಪಸರಿಸುವ ಶ್ಲಾಘನೆಯ ಮಿತ್ರೋತ್ಸವ

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಎರುಂಬು: ಅಳಿಕೆ ಗ್ರಾಮದ ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರ ವೃಂದವು ಬದುಕಿದ್ದಾಗ ಸಮಾಜಕ್ಕಾಗಿ ತ್ಯಾಗ ಮಾಡಿದ ದಿ. ರಾಮಯ್ಯಬಲ್ಲಾಳರ ಸ್ಮರಣಾರ್ಥ ಆಯೋಜಿಸಿದ ನಾಟಕ ಕಾರ್ಯಕ್ರಮದ ಸಭಾ ಸಮಾರಂಭವು
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಚಂದ್ರಶೇಖರ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರು ಕಾರ್ಯಕ್ರಮವನ್ನು ಉದ್ದೇಶಿಸಿ, ಜನನ ಮರಣದ ನಡುವಿನ ಜೀವನತ್ಯಾಗ ಸಂಸ್ಕಾರಗಳಿಂದ ಕೂಡಿರಬೇಕೆಂದು ಶುಭ ಹಾರೈಸಿದರು. ಶಿಸ್ತು, ನಿಷ್ಠೆಗಳು ವ್ಯಕ್ತಿತ್ವದ ನಿರ್ಮಾಣಕ್ಕೆ ಬುನಾದಿ, ಸತ್ಯ ಸಾಯಿ ವಿದ್ಯಾ ಸಂಸ್ಥೆ ಇದನ್ನು ಹೇಳಿಕೊಟ್ಟಿದೆ ಇದರಿಂದ ಗ್ರಾಮದ ಸಂಸ್ಥೆಗಳು ಗೌರವ, ನಿಷ್ಠೆಯಿಂದ ನಡೆಸುವುದಕ್ಕೆ ಪೂರಕವಾಗಿದೆ ಎಂದು ವಿಟ್ಲದ ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ ಶುಭ ಹಾರೈಸಿದರು.

ವಿದ್ಯಾಸಂಸ್ಥೆ ಸರ್ವರ ಜವಾಬ್ದಾರಿ, ಉಳಿಸಿ ಬೆಳೆಸುವ ಹೊಣೆ ಎಲ್ಲರದ್ದು ಎನ್ನುವುದಾಗಿ ವೈದ್ಯರಾದ ಡಾ. ವಿಕ್ರಮ್ ಶೆಟ್ಟಿ ಶುಭ ಹಾರೈಸಿದರು.ರಂಗ ಬಂಧು ಗುಭ್ಯ ಶ್ರೀಧರ ಶೆಟ್ಟಿ ಮೇಗಿನಗುತ್ತು ರವರು ಭಜನೆ ಮುಂದಿನ ಪೀಳಿಗೆಯವರಲ್ಲಿ ನಮ್ಮ ಸಂಸ್ಕೃತಿ ಉಳಿಸುವ ಪ್ರಯತ್ನ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಸತ್ಯ ಸಾಯಿ ವಿದ್ಯಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೋಡ್ಲ ಕೃಷ್ಣ ಭಟ್, ವಿಟ್ಲ ಜೇಸಿ ಅಧ್ಯಕ್ಷ ಸಂತೋಷ್‌ ಪೆಲತಡ್ಕ, ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ಪ್ರಭಂದಕ ಜಗದೀಶ್ ಬಲ್ಲಾಳ್, ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ, ಅಳಿಕೆ ಗ್ರಾಮಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು,ಎರುಂಬು ವಿಷ್ಣುಮಂಗಲ ದೇವಳದ ಪ್ರಧಾನ ಅರ್ಚಕ ಬಾಲಕೃಷ್ಣ ಕಾರಂತ, ಶುಭ ಹಾರೈಸಿದರು. ಈ ಸಂದರ್ಭ ಹಿರಿಯರೂ, ಅಳಿಕೆ ಸಂಸ್ಥೆಯ ನಿವೃತ್ತ ಮುಖ್ಯ ಉಪಾದ್ಯಾಯಿನಿ ವೆಂಕಟಲಕ್ಷ್ಮಿ ಕೆ ವಿ, ಕೃಷಿಕ ಜಗತ್ಷ್ಯಂತಪಾಲ ಭಂಡಾರಿ, ಸಾಮಾಜಿಕ ಕಾರ್ಯಕರ್ತ ಕಾನ ಈಶ್ವರ ಭಟ್, ಹಿರಿಯ ಸರಕಾರಿ ಮತ್ತು ಸಾಮಾಜಿಕ ಸೇವಕ ರಮೇಶ್ ಬಂಗೇರ ಬೂಡು, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ದಿವ್ಯಜ್ಯೋತಿ ಮಿತ್ರವೃಂದದ ಅಧ್ಯಕ್ಷ ರಾಧಾಕೃಷ್ಣ ಎರುಂಬು ಸ್ವಾಗತಿಸಿ, ಗೌರವಾಧ್ಯಕ್ಷ ಮೊಹನದಾಸ.ರೈ ಪ್ರಸ್ತಾವಿಸಿ, ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಪ್ರವೀಣ್ ಶೆಟ್ಟಿ ಮೈರ ಇವರು ನಡೆಸಿಕೊಟ್ಟರು. ಮಿತ್ರವೃಂದದ ಸದಸ್ಯರಾದ ಪೂಜಾ ಎರುಂಬು, ಸುಮನಾ ರವಿಶಂಕರ್, ಪ್ರಭ ಜಯಪಕಾಶ್, ಪುಷ್ಪ ಬಲ್ಲಾಳ್ ಸನ್ಮಾನ ಪತ್ರ ವಾಚಿಸಿದರು.ದಿವ್ಯನಿಧಿ ರೈ ಪ್ರಾರ್ಥಿಸಿದರು.ಬಳಿಕ ಶಾರದಾ ಆರ್ಟ್ಸ್ ಮಂಜೇಶ್ವರ ಇವರಿಂದ “ಕಥೆ ಎಡ್ಡೆಂಡು ” ನಾಟಕ ಜರಗಿತು.

- Advertisement -

Related news

error: Content is protected !!