- Advertisement -
- Advertisement -






ಉಡುಪಿ: ಕೌಟುಂಬಿಕ ಕಾರಂದ ಹಿನ್ನಲೆ ಮಾನಸಿಕವಾಗಿ ನೊಂದ ಮಹಿಳೆಯೊಬ್ಬರು ಮರಣ ಪತ್ರ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಉಡುಪಿ ಕೊರಂಗ್ರಪಾಡಿ ಸಾಯಿಬಾಬ ಮಂದಿರದ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಭಾರತಿ ಶೆಟ್ಟಿಗಾರ್ (63) ಎಂದು ಗುರುತಿಸಲಾಗಿದೆ.
ಇವರು ತನ್ನ ಗಂಡ ಮನೆಯಲ್ಲಿ ಇಲ್ಲದ ಕಾರಣ ಮನನೊಂದು ಅಡುಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣ ಪತ್ರದಲ್ಲಿ ನಾನು ಇಷ್ಟೆಲ್ಲ ಮಾಡಿ ನನ್ನ ಸೊಸೆಗೆ ಮಕ್ಕಳಿಗೆ ಬೇಡವಾದ ಮೇಲೆ ಏಕೆ ಇರಬೇಕು ಎಂಬುದಾಗಿ ಬರೆದಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -