


ಕುಂದಾಪುರ : ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಾಪುರ ಠಾಣಾ ವ್ಯಾಪ್ತಿಯ ಕಾವ್ರಾಡಿ ಗ್ರಾಮದ ಸದಾಶಿವ (33) ಆತ್ಮಹತ್ಯೆ ಮಾಡಿಕೊಂಡವರು.
ಬೆಂಗಳೂರಿನ ಖಾಸಾಗಿ ಕಂಪೆನಿಯೊಂದರಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ ಕುಂದಾಪುರದ ಸದಾಶಿವ ಅವರು ಇತ್ತೀಚಿಗೆ ವರ್ಕ್ ಪ್ರಮ್ ಹೋಂ ಆಗಿ ಕೆಲಸ ಮಾಡಿಕೊಂಡಿದ್ದರು. ಬೆಳಿಗ್ಗೆ ಸದಾಶಿವರವರು ಬಾವಿಯ ರಾಟೆ ಕಟ್ಟುವ ಕಬ್ಬಿಣದ ದಂಡೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಮೇ 16ರ ರಾತ್ರಿ 9.30ಕ್ಕೆ ಎಲ್ಲರೂ ಊಟ ಮಾಡಿ ಮಲಗಿದ್ದು, ಬೆಳಗ್ಗೆ ಸದಾಶಿವ ಅವರ ಪತ್ನಿ ಸುಪ್ರೀತಾ ಅವರು ಮನೆಯ ಬಾಗಿಲು ತೆಗೆದು
ನೋಡಿದಾಗ ಎದುರಿನ ಬಾವಿಯ ದಂಡೆಯಲ್ಲಿ ಟಾರ್ಚ್ ಲೈಟ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಹತ್ತಿರ ಹೋಗಿ ನೋಡಿದಾಗ ಪತಿ ಸದಾಶಿವ ಅವರ ಮೃತದೇಹ ಬಾವಿಯ ರಾಟೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.