Monday, June 30, 2025
spot_imgspot_img
spot_imgspot_img

ವಿಟ್ಲ: ಬ್ಯಾಂಕ್‌ ಮ್ಯಾನೇಜರ್‌ನ ಅಸಡ್ಡೆತನದಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸ ಕಾರ್ಯಗಳು: ಸಾರ್ವಜನಿಕರ ಪರದಾಟ

- Advertisement -
- Advertisement -

ನಮ್ಮ ದುಡಿಮೆ ಬಿಟ್ಟು ಇವರ ಅಸಡ್ಡೆತನಕ್ಕೆ ವಾರ ಪೂರ್ತಿ ಬ್ಯಾಂಕ್‌ನಲ್ಲಿಯೇ ಕಾಲಹರಣ ಮಾಡಬೇಕೆ..?: ಸಾರ್ವಜನಿಕರ ಆಕ್ರೋಶ

ಬ್ಯಾಂಕ್‌ ಮ್ಯಾನೇಜರ್‌ನ ಅಸಡ್ಡೆ ಕರ್ತವ್ಯ ಸೇವೆಯಿಂದ ಬ್ಯಾಂಕ್‌ಗೆ ಬಂದ ಸಾರ್ವಜನಿಕರು ಪ್ರತೀದಿನ ಪರದಾಡುವ ಪರಿಸ್ಥಿತಿ ಎದುರಾದ ಸನ್ನಿವೇಶ ವಿಟ್ಲದ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ.

ಬ್ಯಾಂಕ್‌ ಗೆ ಪ್ರತೀ ದಿನ ಹಲವಾರು ಗ್ರಾಹಕರು ತಮ್ಮ ವಹಿವಾಟು ಕೆಲಸ ಕಾರ್ಯಗಳಿಗೆ ಬರುತ್ತಿದ್ದು, ತಮ್ಮ ಕೆಲಸ ಕಾರ್ಯಗಳಿಗೆ ಎಷ್ಟು ಹೊತ್ತು ಕಾದುಕುಳಿತರೂ, ಯಾವುದೇ ಸ್ಪಂದನೆ ನೀಡುವುದಿಲ್ಲ. ಈ ಬಗ್ಗೆ ಬ್ಯಾಂಕ್‌ ಗ್ರಾಹಕರು ಬ್ಯಾಂಕ್‌ನಲ್ಲಿ ಸರ್ವರ್‌ ತೊಂದರೆ ಇರಬಹುದೇನೆಂದು ತಮ್ಮನ್ನು ತಾವೇ ಸಮಧಾನಿಸಿಕೊಂಡು ತಮ್ಮ ಕೆಲಸ ಕಾರ್ಯಗಳಿಗೆ ದಿನವಿಡೀ ಕಾದು ಕುಳಿತರೂ ಮತ್ತೆ ನಾಳೆ ಬನ್ನಿ ಎನ್ನುವ ಬ್ಯಾಂಕ್‌ ಮ್ಯಾನೇಜರ್‌ನ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಸಾರ್ವಜನಿಕರ ಸಣ್ಣ ಕೆಲಸ ಕಾರ್ಯಗಳಿಗೂ ಒಂದು ವಾರದ ಕಾಲಾವಕಾಶವನ್ನು ತೆಗೆದುಕೊಳ್ಳುವ ಇಲ್ಲಿನ ಬ್ಯಾಂಕ್‌ ಮ್ಯಾನೇಜರ್‌ ಬಳಿ ಸಣ್ಣ ಕೆಲಸ ಕಾರ್ಯಗಳು ಯಾಕಿಷ್ಟು ತಡವಾಗುತ್ತಿವೆ ಎಂದು ವಿಚಾರಿಸಿದರೆ ಸರ್ವರ್‌ ಇಲ್ಲ ಎಂದು ಅಸಡ್ಡೆ ಉತ್ತರ ನೀಡುತ್ತಾರೆ. ಈ ಬಗ್ಗೆ ಉಳಿದ ಕೆನೆರಾ ಬ್ರಾಂಚ್‌ಗಳಲ್ಲಿ ವಿಚಾರಿಸಿದಾ ಎಲ್ಲಾ ಬ್ರಾಂಚ್‌ಗಳಲ್ಲೂ ಸರ್ವರ್‌ ವ್ಯವಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ವಿಟ್ಲ ಕೆನರಾ ಬ್ರಾಂಚ್‌ನಲ್ಲಿ ಕೆಲಸ ಕಾರ್ಯಗಳ ನಿಧಾನಗತಿಗೆ ಯಾರು ಕಾರಣ? ಸಾರ್ವಜನಿಕರು ತಮ್ಮ ದುಡಿಮೆ ಬಿಟ್ಟು ಇವರ ಅಸಡ್ಡೆತನಕ್ಕೆ ವಾರ ಪೂರ್ತಿ ಬ್ಯಾಂಕ್‌ನಲ್ಲಿಯೇ ಕಾಲಹರಣ ಮಾಡಬೇಕೆ..? ಈ ಬಗ್ಗೆ ಯಾರು ಹೇಳೋರು ಕೇಳೋರು ಇಲ್ವಾ..? ಎಂಬುವುದು ಸಾರ್ವಜನಿಕರ ಆಕ್ರೋಶವಾಗಿದೆ.

- Advertisement -

Related news

error: Content is protected !!