Saturday, June 28, 2025
spot_imgspot_img
spot_imgspot_img

21 ಐಎಎಸ್‌ ಅಧಿಕಾರಿಗಳ ವರ್ಗಾವಣೆ: ಯಾರು?ಎಲ್ಲಿಗೆ? ಇಲ್ಲಿದೆ ಡಿಟೈಲ್ಸ್‌

- Advertisement -
- Advertisement -

ಬೆಂಗಳೂರು: ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ, ಒಟ್ಟು 21 ಐಎಎಸ್ ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೊನ್ನೆಯಷ್ಟೇ (ಜುಲೈ 3) 25 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಆಡಳಿತ ವಿಭಾಗಕ್ಕೂ ಚುರುಕು ಮುಟ್ಟಿಸಿದೆ.

ವರ್ಗಾವಣೆಯಾದ ಎಲ್ಲ ಅಧಿಕಾರಿಗಳು ಕೂಡಲೇ ನೂತನ ಜಾಗಗಳಿಗೆ ರಿಪೋರ್ಟ್ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್ ಕುಮಾರ್ ಎಸ್. ನಿರ್ದೇಶಿಸಿದ್ದಾರೆ.

ವಿವಿಧ ಹುದ್ದೆಗಳಿಗೆ ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಮತ್ತು ವರ್ಗಾವಣೆಯಾದ ವಿವರ ಈ ಕೆಳಗಿನಂತಿದೆ.

ಕೆ.ವಿ ರಾಜೇಂದ್ರ: (ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ)
ಲಕ್ಷ್ಮೀಕಾಂತ್ ರೆಡ್ಡಿ: (ಜಿಲ್ಲಾಧಿಕಾರಿ, ಮೈಸೂರು)
ಡಾ. ರಾಮ್‌ ಪ್ರಸಾದ್ ಮನೋಹರ್‌ ವಿ: (ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)
ನಿತೇಶ್ ಪಾಟೀಲ್: (ನಿರ್ದೇಶಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಇಲಾಖೆ)
ಡಾ. ಅರುಂಧತಿ ಚಂದ್ರಶೇಖರ್: (ಆಯುಕ್ತರು, ಪಂಚಾಯತ್ ರಾಜ್ ಇಲಾಖೆ)
ಜ್ಯೋತಿ ಕೆ: (ಆಯುಕ್ತರು, ಜವಳಿ ಅಭಿವೃದ್ಧಿ ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ)
ಶ್ರೀಧರ ಸಿಎನ್: (ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ)
ಚಂದ್ರಶೇಖರ ನಾಯಕ ಎಲ್: (ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ)
ವಿಜಯಮಹಾಂತೇಶ ಬಿ ದಾನಮ್ಮನವರ್:( ಜಿಲ್ಲಾಧಿಕಾರಿ, ಹಾವೇರಿ)
ಗೋವಿಂದ ರೆಡ್ಡಿ: (ಜಿಲ್ಲಾಧಿಕಾರಿ, ಗದಗ)
ರಘುನಂದನ್ ಮೂರ್ತಿ: (ಆಯುಕ್ತರು, ಖಜಾನೆಗಳು ಮತ್ತು ಲೆಕ್ಕಪತ್ರ ಇಲಾಖೆ)
ಡಾ. ಗಂಗಾಧರಸ್ವಾಮಿ ಜಿ ಎಂ: (ಜಿಲ್ಲಾಧಿಕಾರಿ, ದಾವಣಗೆರೆ)
ನಿತೀಶ್ ಕೆ: (ಜಿಲ್ಲಾಧಿಕಾರಿ, ರಾಯಚೂರು)
ಮೊಹಮ್ಮದ್ ರೋಶನ್: (ಜಿಲ್ಲಾಧಿಕಾರಿ, ಬೆಳಗಾವಿ)
ಶಿಲ್ಪಾ ಶರ್ಮಾ: (ಜಿಲ್ಲಾಧಿಕಾರಿ, ಬೀದರ್)
ಡಾ ದಿಲೀಶ್ ಸಸಿ: (ಕೇಂದ್ರ ಸಿಇಒ, ಇ-ಆಡಳಿತ)
ಲೋಖಂಡೆ ಸ್ನೇಹಲ್ ಸುಧಾಕರ್: (ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್)
ಶ್ರೀರೂಪ: ಆಯುಕ್ತರು, (ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ)
ಗಿಟ್ಟೆ ಮಾಧವ್ ವಿಠ್ಠಲ್ ರಾವ್: (ಪ್ರಧಾನ ವ್ಯವಸ್ಥಾಪಕರು, ಪುನರ್ವಸತಿ ಕೇಂದ್ರ ಬಾಗಲಕೋಟೆ)
ಹೇಮಂತ್ ಎನ್: ಸಿಇಒ, ಜಿಲ್ಲಾ ಪಂಚಾಯತ್, ಶಿವಮೊಗ್ಗ
ಮೊಹಮ್ಮದ್ ಅಲಿ ಅಕ್ರಮ್ ಶಾ: (ಮುಖ್ಯ ಕಾರ್ಯನಿರ್ವಾಹಕ, ಜಿಲ್ಲಾ ಪಂಚಾಯತ್, ವಿಜಯನಗರ)

- Advertisement -

Related news

error: Content is protected !!