- Advertisement -
- Advertisement -



ಕಾಸರಗೋಡು: ನ್ಯೂಮೋನಿಯಾದಿಂದ ನಾಲ್ಕು ವರ್ಷದ ಬಾಲಕಿ ಮೃತ ಪಟ್ಟ ಘಟನೆ ನೀರ್ಚಾಲು ಸಮೀಪ ನಡೆದಿದೆ.
ಮೃತಪಟ್ಟ ಬಾಲಕಿಯನ್ನು ನೀರ್ಚಾಲು ಪುದುಕೋಳಿಯ ನಿವಾಸಿ ಕಾಸರಗೋಡು ಕೆನರಾ ಬ್ಯಾಂಕ್ ನೌಕರ ಹರೀಶ್ ಮತ್ತು ಮೊಗ್ರಾಲ್ ಪುತ್ತೂರು ಹಯರ್ ಸೆಕಂಡರಿ ಶಾಲಾ ಶಿಕ್ಷಕಿ ಕುಸುಮಾ ರವರ ಪುತ್ರಿ ಭೂಮಿಕಾ (4) ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಮಳೆ ಬಿರುಸು ಗೊಳ್ಳುತ್ತಿದ್ದಂತೆ ಜ್ವರ ಹಾಗೂ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿದೆ . ಭೂಮಿಕಾ ಜ್ವರದಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
- Advertisement -