Sunday, April 28, 2024
spot_imgspot_img
spot_imgspot_img

ಉಳ್ಳಾಲ: ಖಾದರ್‌ ಜೊತೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆಯೇ ಲೇಸು: ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಯುಟಿಕೆ ಆಪ್ತ ಸಂತೋಷ್ ಶೆಟ್ಟಿ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಮಂಗಳೂರು: ಉಳ್ಳಾಲದ ಶಾಸಕ ಯು.ಟಿ.ಖಾದರ್ ಅವರ ಆಪ್ತ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ‌‌. ಹೀಗೆಂದು ಸ್ವತಃ ಸಂತೋಷ್ ಶೆಟ್ಟಿ ಅವರೇ ಸುದ್ದಿಗೋಷ್ಠಿಯಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಟಿ.ಖಾದರ್ ಅವರ ಕೆಲಸಕ್ಕೆ ಬೇಸತ್ತು 100ಕ್ಕೂ ಅಧಿಕ ಬೆಂಬಲಿಗರೊಂದಿಗೆ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಯು ಟಿ ಖಾದರ್ ಗೆ ಕರುಣೆ ಇಲ್ಲ. ಏನೂ ಕೆಲಸ‌ ಮಾಡಿಲ್ಲ.ಇವರ ಜೊತೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಉತ್ತಮ. ಖಾದರ್ ಸ್ವಾರ್ಥಿ, ಭ್ರಷ್ಟ ರಾಜಕಾರಣಿ ಎಂದು ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಖಾದರ್ ನಾಲ್ಕು ಬಾರಿ ಶಾಸಕರಾದರೂ ಯಾವುದೇ ಕಾರ್ಯವನ್ನು ಖಾದರ್ ಮಾಡಿಲ್ಲ. ಸಣ್ಣ ಒಳರಸ್ತೆಯನ್ನು ಉದ್ಘಾಟನೆ ಮಾಡಿ, ಮದುವೆ, ಮುಂಜಿ ಕಾರ್ಯಕ್ರಮಕ್ಕೆ ಹೋಗಿ ಡ್ರಾಮ ಮಾಡ್ತಿದ್ದಾರೆ. ಹೀಗೆ ಆರೋಪಗಳ ಸುರಿಮಳೆಯೇ ಸುರಿಸಿದ್ದಾರೆ.

- Advertisement -

Related news

error: Content is protected !!