- Advertisement -
- Advertisement -



ಕಲ್ಲಡ್ಕ : ಭಗವಾನ್ ಸಾಯಿಬಾಬ ಮೆಟಲ್ಸ್ ಶಾಪ್ ಇದರ ನೂತನ ಮಳಿಗೆ ಕಲ್ಲಡ್ಕ ಕಾವೇರಿ ಸಂಕೀರ್ಣ ಇಲ್ಲಿ ಶುಭಾರಂಭಗೊಂಡಿದೆ. ಉತ್ತಮ ದರ್ಜೆಯ ಲೋಹದ ಪೂಜಾ ಸಾಮಾಗ್ರಿಗಳು, ತುಳುನಾಡಿನ ದೈವಗಳ ಮೊಗ ಮೂರ್ತಿ ಇತ್ಯಾದಿ ಪರಿಕರಗಳು ಇಲ್ಲಿ ಲಭ್ಯವಿದೆ.
ಈ ನೂತನ ಮಳಿಗೆಯ ಉದ್ಘಾಟನೆಯನ್ನು ವಿಜಯ ಮತ್ತು ವಾಣಿ ಇವರು ನಡೆಸಿದರು. ಮತ್ತು ಮುಖ್ಯ ಅತಿಥಿಗಳಾಗಿ ಮಹಾಬಲ ಸಾಲ್ಯಾನ್ ಮುಳಿಕೊಡಂಗೆ, ಜಗನ್ನಾಥ ಪೂಜಾರಿ ನರಹರಿ ನಗರ ಹಾಗೂ ಪ್ರಕಾಶ್ ಶೆಣೈ ಇವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಳಿಗೆಯ ಸಂಸ್ಥಾಪಕ ಮನೋಜ್ ಕುಮಾರ್ ಕಟ್ಟೆಮಾರ್ ಮಾತನಾಡಿ ಈ ಭಗವಾನ್ ಸಾಯಿಬಾಬ ಮೆಟಲ್ಸ್ ಶಾಪ್ನಲ್ಲಿ ಉತ್ತಮ ದರ್ಜೆಯ ಲೋಹದ ಪೂಜಾ ಸಾಮಾಗ್ರಿಗಳು, ತುಳುನಾಡಿನ ದೈವಗಳ ಮೊಗ ಮೂರ್ತಿ ಇತ್ಯಾದಿ ಪರಿಕರಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಸುಲಭವಾಗಿ ದೊರೆಯಲಿದೆ. ಅಲ್ಲದೆ ಗ್ರಾಹಕರ ಮನೋಭಿಲಾಷೆಗೆ ತಕ್ಕಂತ ಸಾಮಾಗ್ರಿಗಳನ್ನು ಮುಂಚಿತವಾಗಿ ತಿಳಿಸಿದ್ದಲ್ಲಿ ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ದೊರೆಯುವಂತೆ ನಾವು ಮಾಡಿಕೊಡುತ್ತೇವೆ ಎಂದು ತಿಳಿಸಿದರು.



- Advertisement -