


ಬಂಟ್ವಾಳ : ಸೀನಿಯರ್ ಛೇಂಬರ್ ಇಂಟರ್ನ್ಯಾಶನಲ್ ಸಂಸ್ಥೆಯ ಬಂಟ್ವಾಳ *ನೇತ್ರಾವತಿ ಸಂಗಮ ಘಟಕದ ವತಿಯಿಂದ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಆಗಸ್ಟ್ 3ಮತ್ತು4ರಂದು ಏರ್ಪಡಿಸಲಾದ *ಹಲಸು ಮತ್ತು ಹಣ್ಣುಗಳ ಬೃಹತ್ ಮೇಳ*ದ ಪ್ರಯುಕ್ತ ಪ್ರಬಂಧ ಸ್ಪರ್ಧೆ ಯನ್ನು ಆಗಸ್ಟ್ 3ರಂದು, ಅಪರಾಹ್ನ ಸಮಯ 3ರಿಂದ 4ಗಂಟೆವರೆಗೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವುದಕ್ಕೆ ಮುಕ್ತ ಅವಕಾಶ ನೀಡಲಾಗಿದೆ.
ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆಯು ಆಗಸ್ಟ್ 4 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಲಾಗುವುದು.
ಬಹುಮಾನಗಳು :
ಪ್ರಥಮ 1000/,
ದ್ವಿತೀಯ 750/,
ತೃತೀಯ 500/
ಸಮಾಧಾನಕರ 5 ಬಹುಮಾನಗಳು 300/ ರೂಪಾಯಿಗಳು.
ಪ್ರಬಂಧ ಸ್ಪರ್ಧೆಯ ವಿಷಯ: ಮಾನವ ಮತ್ತು ಪರಿಸರ ಪ್ರಜ್ಞೆ “ಪ್ರಕೃತಿ ಒಮ್ಮೆ ಮುನಿದರೆ ಮಾನವ ಕುಬ್ಜ…..!.ಪರಿಸರ ಮತ್ತು ಜೀವ ಸಂಕುಲಗಳು…!ಇದರೊಂದಿಗೆ ಬದುಕು” ಅಲ್ಲವೇ..?ಪ್ರಕೃತಿ ಸಂರಕ್ಷಿಸೋಣ…
ಸೂಚನೆಗಳು:
*ಪ್ರಬಂಧವನ್ನು ಸ್ಥಳದಲ್ಲಿ ಬಂದು ಬರೆಯಬೇಕು.
*ಕಾಗದ,ಪೆನ್ನು ನೀಡಲಾಗುವುದು.
*ಒಂದು ಗಂಟೆ ಸಮಯ ನೀಡಲಾಗುವುದು.
*ಎರಡು ಪುಟ ಮೀರಬಾರದು.
*ಅಕ್ಷರಗಳು ಸ್ಪಷ್ಟವಾಗಿ ಮತ್ತು ಅಂದವಾಗಿರಬೇಕು.
*ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Snr. ಶೈಲಜಾ ರಾಜೇಶ್
77601 39820
Snr. ಪ್ರೀತಿ ಪ್ರಕಾಶ್ ಹೆಗ್ಡೆ
8861281571