- Advertisement -
- Advertisement -
ಶಿರ್ವ(ಅ.29): ಮಹಿಳೆಯೋರ್ವರು ಬ್ಲೇಡಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿರ್ವ ಗ್ರಾಮದ ಬಂಟಕಲ್ಲು ಎಂಬಲ್ಲಿ ನಡೆದಿದೆ.
ಬಂಟಕಲ್ಲು ಅರಸಿಕಟ್ಟೆ, ನಿವಾಸಿ ಪ್ರೇಮಾ(38) ರವರು ವಿಪರೀತ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದರು.ನಂತರ ರಾತ್ರಿ 08.00 ಗಂಟೆಗೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದಾಗ ಊಟ ಮಾಡಿ ಮಲಗಲು ಗಂಡ ತಿಳಿಸಿದಾಗ ಕೋಪಗೊಂಡು ಮನೆಯ ಕೋಣೆಯ ಬಾಗಿಲನ್ನು ಹಾಕಿದ್ದು ನಂತರ ಮನೆಯವರು ಬಾಗಿಲನ್ನು ತೆರೆಯುವಂತೆ ಹೇಳಿದಾಗ ನಶೆಯಲ್ಲಿದ್ದ ಪ್ರೇಮಾರವರು ಅಲ್ಲಿಯೇ ಇದ್ದ ಒಂದು ಬ್ಲೇಡಿನಲ್ಲಿ ಕೈ ಕೊಯ್ದಕೊಂಡಿದ್ದಾರೆ. ಇದರಿಂದ ವಿಪರೀತ ರಕ್ತಸ್ರಾವ ಉಂಟಾಗಿದೆ.
ಕೂಡಲೇ ಪ್ರೇಮಾರವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದು ತಂದರು ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
- Advertisement -