Sunday, June 29, 2025
spot_imgspot_img
spot_imgspot_img

ಉರಿಮಜಲು ಜಂಕ್ಷನ್‌ನಲ್ಲಿ ಚೂರಿ ‌ಇರಿತ; ಶರೀಫ್ ಗಂಭೀರ..!

- Advertisement -
- Advertisement -

ಸಾರ್ವಜನಿಕರ ಎದುರಲ್ಲೇ ಚೂರಿ ಇರಿದ ಘಟನೆ ಉರಿಮಜಲು ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್‌ನ ಎದುರಲ್ಲಿ ಕಾರ್ಯಡಿ ನಿವಾಸಿ ರಾವೂಫ್ ಎಂಬವರ ಪುತ್ರ ಆಪೀ ಎಂಬವನು ಚೂರಿ ಇರಿದಿದ್ದಾನೆ.

ಉರಿಮಜಲು ಮತ್ತು ಕಾರ್ಯಾಡಿ ಎಂಬಲ್ಲಿ ಗಾಂಜಾ ವ್ಯಸನಿಗಳ ಕಾಟ ಹೆಚ್ಚಾಗುತ್ತಿದ್ದು ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಗಾಂಜಾ ವ್ಯಸನಿಗಳನ್ನು ಮಟ್ಟ ಹಾಕಬೇಕೆಂದು ಸಾರ್ವಜನಕರು ಒತ್ತಾಯಿಸಿದ್ದಾರೆ.

ಗಂಭೀರ ಗಾಯಗೊಂಡ ಶರೀಫ್‌ನನ್ನು ಸ್ಥಳಿಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!