- Advertisement -
- Advertisement -


ಶ್ರೀ ವೈದ್ಯನಾಥ ಮಲರಾಯ ಮತ್ತು ಸಪರಿವಾರ ದೈವಸ್ಥಾನ,(ರಿ )ಮಲರಾಯ ಜೇರ – ಧರ್ಮನಗರ ಕಂಬಳಬೆಟ್ಟು ಇದರ ಬ್ರಹ್ಮಕಲಶದ ಪೂರ್ವತಯಾರಿಯ ಕಾರ್ಯಗಳ ಬಗ್ಗೆ ಮಹಾಸಭೆಯು 25/8/2024ನೇ ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಧರ್ಮನಗರದ ಸಮಾಜ ಮಂದಿರದಲ್ಲಿ ನಡೆಯಿತು.

ಡಿಸೆಂಬರ್ 21 ರಿಂದ 25ರವರೆಗೆ ಐದು ದಿನಗಳ ಕಾಲ ನಡೆಯುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಪ್ರಮುಖ ರೂಪುರೇಷೆಗಳನ್ನು ಮತ್ತು ವಿವಿಧ ಸಮಿತಿಗಳ ಕೆಲಸ ಕಾರ್ಯದ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಬ್ರಹ್ಮಕಲಶದ ಎಲ್ಲಾ 18 ಉಪಸಮಿತಿಯ ಸಂಚಾಲಕರು, ಪದಾಧಿಕಾರಿಗಳು ಹಾಗೂ ಇಡ್ಕಿದು,ಕುಳ, ವಿಟ್ಲ ಮುಡ್ನೂರು ಈ ಮೂರು ಗ್ರಾಮಗಳ ಬ್ರಹ್ಮಕಲಶದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲಿರುವ ಕಾರ್ಯಕರ್ತರು , ಊರ ಪ್ರಮುಖರು ಹಾಗೂ ಸಜ್ಜನ ಗ್ರಾಮಸ್ಥರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
- Advertisement -