- Advertisement -
- Advertisement -



ವಿಟ್ಲ: ವಿಟ್ಲದ ದಿ ನಾಲೇಡ್ಜ್ ಹಬ್ ಟ್ಯೂಷನ್ ಸೆಂಟರ್ ನಲ್ಲಿ ಶಿಕ್ಷಕ-ರಕ್ಷಕರ ಸಭೆ ನಡೆಯಿತು.
ವಿಟ್ಲ ಸರಕಾರಿ ಪ್ರೌಢ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ಶಿಕ್ಷಕರ ಜತೆ ಮಕ್ಕಳ ಹೆತ್ತವರ ಜವಾಬ್ದಾರಿಯು ಇದೆ. ಹೆತ್ತವರು ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.
ಬ್ಯಾರೀಸ್ ಎಂಜಿನಿಯರ್ ಕಾಲೇಜಿನ ಪ್ರೋಪೆಸರ್ ಮುಸ್ತಪಾ ಖಲೀಲ್ ಅವರು ಮಾತನಾಡಿದರು. ಸೌದಿ ಅರೇಬಿಯಾ ಉದ್ಯಮಿ ವಿಕೆಎಂ ಅಬ್ದುಲ್ ಸಾಲಿ, ನಾಲೇಡ್ಜ್ ಹಬ್ ನ ಕಾರ್ಯನಿರ್ವಾಹಕಿ ಶಿಕ್ಷಕಿ ಮಾಸಿತಾ ಉಪಸ್ಥಿತರಿದ್ದರು.
ಸ್ವಾತಂತ್ರೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕಿಯರಾದ ಜಯಶ್ರೀ ನಿರೂಪಿಸಿದರು. ಸಲೀಲಾ ಸ್ವಾಗತಿಸಿದರು. ರಂಸೀನ ವಂದಿಸಿದರು.
- Advertisement -