- Advertisement -
- Advertisement -





ಕಂಬಳಬೆಟ್ಟು -ಧರ್ಮನಗರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಆಶ್ರಯದಲ್ಲಿ ಮೂರು ದಿನಗಳ ಕಾಲ ಕಂಬಳ ಬೆಟ್ಟು -ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯುವ 53 ನೇ ವರ್ಷದ ಸಾರ್ವಜನಿಕ ಶ್ರೀ ಮಹಾ ಗಣೇಶೋತ್ಸವದ ಪೂರ್ವ ಭಾವಿಯಾಗಿ ಶ್ರೀ ದೇವರ ಶೋಭಯಾತ್ರೆ ಸಾಗುವ ಎಲ್ಲಾ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.


ರಸ್ತೆ ಬದಿಯಲ್ಲಿದ್ದ ಹುಲ್ಲು ಕಸ ಕಡ್ಡಿಗಳನ್ನು ಮಿಷನ್ ಮೂಲಕ ತೆಗೆದು ಶ್ರೀ ಗಣೇಶ ಭವ್ಯ ಶೋಭಾಯಾತ್ರೆಯ ಪೂರ್ವಭಾವಿಯಾಗಿ ಶ್ರಮದಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

- Advertisement -