Friday, June 27, 2025
spot_imgspot_img
spot_imgspot_img

ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ; ಜನಪ್ರಿಯ ಸಮ್ಮೇಳನ

- Advertisement -
- Advertisement -

ಆಸ್ಪತ್ರೆಗಳು ಚಿಕಿತ್ಸೆಯ ಜೊತೆಗೆ ರೋಗ ಬಾರದಂತೆ ತಡೆಗಟ್ಟುವ ಚಿಕಿತ್ಸಾ ಕೇಂದ್ರಗಳಾಗಲಿ’- ಸ್ಪೀಕರ್ ಯು ಟಿ ಖಾದರ್

ಮಂಗಳೂರು: ಹಾಸನದಲ್ಲಿರುವ ಜನಪ್ರಿಯ ಆಸ್ಪತ್ರೆಯ ಸಹಸಂಸ್ಥೆ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಜನಪ್ರಿಯ ಸಮ್ಮಿಲನ ಕಾರ್ಯಕ್ರಮ ಮಂಗಳೂರಿನ ಪಡೀಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆಯ ಕೇಂದ್ರಗಳಾಗಿರಬಹುದು. ಆದರೆ ಅವುಗಳು ರೋಗ ಬಾರದಂತೆ ತಡೆಗಟ್ಟುವ ಚಿಕಿತ್ಸಾ ಕೇಂದ್ರವೂ ಆಗಬೇಕಾಗಿದೆ. ಆಸ್ಪತ್ರೆಗಳನ್ನು ಸ್ಥಾಪಿಸಲು ಅದೆಷ್ಟು ಕಷ್ಟವಿದೆ ಎಂದು ಅದರ ಸ್ಥಾಪಕರಿಗೆ ಮಾತ್ರ ತಿಳಿದಿರುವ ವಿಚಾರ. ಆಸ್ಪತ್ರೆ ಸಹಿತ ಯಾವುದೇ ಉದ್ಯಮಗಳು ಸ್ಥಾಪನೆಯಾದಾಗ ಸ್ಥಳೀಯರು ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕಿದೆ. ಇದರಿಂದ ಪರೋಕ್ಷವಾಗಿ ಸ್ಥಳೀಯರಿಗೆ ಕೂಡಾ ಲಾಭವಿದೆ. ಇಲ್ಲಿನ ಜಮೀನಿನ ದರದಲ್ಲೂ ಹೆಚ್ಚಳವಾಗಲಿದೆ. ಈ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಆಸ್ಪತ್ರೆಯ ಸ್ಥಾಪಕರು ಕಟಿಬದ್ಧರಾಗಿದ್ದಾರೆ. ಅಲ್ಲದೆ ಆಸ್ಪತ್ರೆಯ ಸ್ಥಾಪಕ ಡಾ. ಅಬ್ದುಲ್ ಬಶೀರ್ ಅವರ ಸಾಹಸಮಯ ಬದುಕು ಯುವ ವೈದ್ಯರಿಗೆ ಸ್ಫೂರ್ತಿಯಾಗಬಹುದು ಎಂದರು.

ತಾಯಿ ಮತ್ತು ಮಗುವಿನ ವಿಶೇಷ ಆರೈಕೆ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪಪಾಟೀಲ್ ಮಂಗಳೂರು ಹೆಲ್ತ್ ಹಬ್ ಆಗಿವೆ, ಅದಾಗ್ಯೂ ಡಾ. ಅಬ್ದುಲ್ ಬಶೀರ್ ಧೈರ್ಯ ವಹಿಸಿ ಇಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಹಣ ಗಳಿಕೆಯ ಉದ್ದೇಶಕ್ಕಿಂತ ಸೇವಾ ಮನೋಭಾವವನ್ನು ಅವರು ಹೊಂದಿದ್ದಾರೆ. ’ಟ್ರೀಟ್‌ಮೆಂಟ್ ಫಸ್ಟ್ ಪೇಮೆಂಟ್ ನೆಕ್ಸ್ಟ’ ಎಂದು ಆರಂಭದಲ್ಲೇ ಅವರು ಹೇಳಿದ್ದಾರೆ. ಹಾಗಾಗಿ ಎಲ್ಲರೂ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಮಾಜಿ ಸಚಿವರಾದ ರಮಾನಾಥ ರೈರವರು ಮಾತನಾಡಿ ಡಾ. ಅಬ್ದುಲ್ ಬಶೀರ್ ಓರ್ವ ಸಾಮಾಜಿಕ ಕಳಕಳಿಯ ವೈದ್ಯರಾಗಿದ್ದಾರೆ. ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಆರಂಭಿಸಿದ ಸಂಸ್ಥೆ ಇದಾಗಿದೆ. ಸಂಸ್ಥೆಯಲ್ಲಿ ಟ್ರೋಮೋ ಸೆಂಟರ್ ಆರಂಭಿಸಬೇಕು.ಪೈಪೋಟಿ ಇದ್ದಲ್ಲಿ ಯಶಸ್ಸು ಸಾಧ್ಯ. ಬಡವರಿಗೆ ಸಹಕಾರ ನೀಡುವ ನಿಮ್ಮ ಗುಣ ಅಭಿನಂದನೀಯ ಎಂದರು.

ಮಾಜಿ ಕೇಂದ್ರ ಸಚಿವರಾದ ಸಿ.ಎಂ.ಇಬ್ರಾಹಿಂ ರವರು ಮಾತನಾಡಿ ಬಹಳಷ್ಟು ಕ್ಲಿಷ್ಟಕರ ಆಪರೇಶನ್ ಮಾಡಿದ ಕೀರ್ತಿ ಅಬ್ದುಲ್ ಬಶೀರ್ ರವರಿಗೆ ಸಲ್ಲಬೇಕು. ಬಶೀರ್ ರವರ ಸೇವೆ ಅನನ್ಯವಾದುದು. ಮಾನವೀಯ ಧರ್ಮ ಇರುವ ವ್ಯಕ್ತಿ ಅವರು. ಹಾಸನದಲ್ಲಿ ಇವರ ಜನಪ್ರಿಯತೆ ಬಹಳಷ್ಟಿದೆ. ಇವರಿಂದಾಗಿ ಹಲವು ಬಡರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆದು ತೆರಳಿರುವ ನಿದರ್ಶನಗಳು ಬಹಳಷ್ಟಿದೆ. ಇಲ್ಲಿಯೂ ಬಡವರ ಪಾಲಿಗೆ ಇದು ಸಹಕಾರಿಯಾಗಲಿದೆ ಎಂದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆರವರು ಮಾತನಾಡಿ ಹಲವಾರು ವರುಷದ ಹಿಂದಿನ ಕಾರ್ಯಕ್ರಮವನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಎಲ್ಲ ವರ್ಗದ ಜನರ ಆಶ್ರಯತಾಣ ಇದಾಗಿದೆ. ವಿದ್ಯಾಭ್ಯಾಸಕ್ಕೆ ಒತ್ತು ಕೊಡುವ ಕೆಲಸ ಇವರಿಂದ ನಡೆದಿದೆ. ಜೀವ ಉಳಿಸುವ ಕೆಲಸ ಈ ಆಸ್ಪತ್ರೆಯಿಂದ ಆಗಲಿದೆ. ಇವರ ಸಾಮಾಜಿಕ ಗುಣದಿಂದಾಗಿ ಇವರು ಈ ಹಂತಕ್ಕೆ ತಲುಪಲು ಕಾರಣವಾಗಿದೆ ಎಂದು ಹೇಳಿದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ. ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ತುರ್ತು ಪರಿಹಾರ ಒದಗಿಸಲು ನುರಿತ ವೈದ್ಯಕೀಯ ತಜ್ಞರು ಸಿದ್ಧರಿದ್ದಾರೆ. 130 ಬೆಡ್ ವ್ಯವಸ್ಥೆಯನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯ ಸೇವೆಗಳು ಲಭ್ಯವಿದೆ ಎಂದು ತಿಳಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್, ಹಾಸನದ ಸಂಸದ ಶ್ರೇಯಸ್ ಎಂ. ಪಾಟೇಲ್, ಹಾಸನದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಂ.ಎನ್. ಮೋಹನ್, ಹಾಸನದ ಹಿರಿಯ ವೈದ್ಯ ಡಾ. ಶಾಮ್ ಸಂಪಿಗೆತಾಯ, ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜಾ, ಕೆ.ಪಿ.ಸಿ.ಸಿ. ಪ್ರಧಾ‌ನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಇಂಡಿಯಾನ‌ ಆಸ್ಪತ್ರೆಯ ಮುಖ್ಯಸ್ಥರಾದ ಯೂಸುಫ್ ಕುಂಬ್ಳೆ, ಮಂಗಳೂರಿನ ಹ್ಯೂಸಮ್ ಸ್ಟೀಲ್ಸ್‌ನ ಮ್ಹಾಲಕ ಶಾಕೀರ್ ಹಾಜಿ, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಪ್ರಮುಖರಾದ ಎಸ್.ಎಂ.ರಶೀದ್ ಹಾಜಿ, ರಫೀಕ್ ಮಾಸ್ಟರ್, ಅಬ್ದುಲ್ ಕುದ್ಕೋಳಿ, ಬದ್ರಿಯಾ ಅಬ್ದುಲ್ ಖಾದರ್ , ಡಾ.ಅಣ್ಣಯ್ಯ ಕುಲಾಲ್, ಜನಪ್ರೀಯ ಫೌಂಡೇಶನ್‌ ಉಪಾಧ್ಯಕ್ಷ ಫಾತಿಮಾ ನಸ್ರಿನಾ ಬಶೀರ್, ವೈದ್ಯರಾದ ಡಾ.ಶಾರುಕ್ ಅಬ್ದುಲ್ಲ, ಡಾ. ಜಸ್ನಿ ಬಶೀರ್, ಡಾ.ಶಫಾಕ್ ಮಹಮ್ಮದ್, ಡಾ. ಶಾಮಿಕ್ ಅಬ್ದುಲ್ ರಹಿಮಾನ್, ಜನಪ್ರೀಯ ಫೌಂಡೇಶನ್‌ನ ನಿರ್ದೇಶಕ ಡಾ. ಹಸನ್ ಮುಭಾರಕ್, ಡಾ. ನೂಮನ್ ಮಹಮ್ಮದ್, ಡಾ. ಫಾತಿಮಾ ಇಸ್ಮತ್, ಡಾ. ಆಲಮ್ ನವಾಜ್, ಡಾ. ಮೊಯಿದಿನ್ ನಫ್ಸಿರ್ ಮೊದಲಾದವರು ಉಪಸ್ಥಿತರಿದ್ದರು.

ಜನಪ್ರೀಯ ಫೌಂಡೇಶನ್‌ನ ನಿರ್ದೇಶಕ ಡಾ.ಕಿರಾಶ್ ಪರ್ತಿಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನಪ್ರೀಯ ಫೌಂಡೇಶನ್‌ನ ನಿರ್ದೇಶಕ ನುಮಾನ್ ಆಸ್ಪತ್ರೆಯ ವಿಶೇಷತೆಯ ಬಗ್ಗೆ ತಿಳಿಸಿದರು. ಜನಪ್ರಿಯ ಫೌಂಡೇಶನ್‌ನ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆ.ರವರು ಸ್ವಾಗತಿಸಿ, ಜನಪ್ರೀಯ ಫೌಂಡೇಶನ್‌ನ ನಿರ್ದೇಶಕ ಶಾರುಕ್ ಅಬ್ದುಲ್ಲ ವಂದಿಸಿದರು. ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!