- Advertisement -
- Advertisement -



ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಗಾನಸಿರಿ ಕಲಾ ಕೇಂದ್ರ ವಿಟ್ಲ ಶಾಖೆಯ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಗಾನಸಿರಿ ವಿಟ್ಲ ಶಾಖೆಯ ಮಕ್ಕಳು ಪಂಚಲಿಂಗೇಶ್ವರ ದೇವರ ಎದುರಿನಲ್ಲಿ ತಮ್ಮ ಭಜನೆಯನ್ನು ಮಾಡುವುದರ ಮೂಲಕ ಭಕ್ತರ ಗಮನ ಸೆಳೆದರು.
ಗಾನಸಿರಿ ಕಲಕೇಂದ್ರದ ಗುರುಗಳು ಪುತ್ತೂರಿನ ಕಿರಣ್ ಮಾಸ್ಟರ್ ನೇತೃತ್ವದಲ್ಲಿ ಭಜನಾ ಸಂಕೀರ್ತನೆ ನಡೆಯಿತು.
ಪುತ್ತೂರಿನ ಕಿರಣ್ ಮಾಸ್ಟರ್ ಖ್ಯಾತ ಗಾಯಕರಾಗಿದ್ದು, ಗಾನಸಿರಿ ಕಲಾಕೇಂದ್ರ ದ ಮೂಲಕ ಹಲವಾರು ಗಾಯಕರನ್ನು ಉತ್ತಮ ತರಬೇತಿಯ ಮೂಲಕ ಹಲವು ವೇದಿಕೆಗಳಿಗೆ ಪರಿಚಯಿಸಿದವರು. ಗಾನಸಿರಿ ಕಲಾಕೇಂದ್ರ ಪುತ್ತೂರಿನಲ್ಲಿ ತಮ್ಮ ಕೇಂದ್ರ ತರಬೇತಿ ಸಂಸ್ಥೆಯನ್ನು ಹೊಂದಿದ್ದು ವಿಟ್ಲ ಸೇರಿದಂತೆ ಹಲವಾರು ಕಡೆ ತಮ್ಮ ಶಾಖೆಗಳನ್ನು ತೆರೆದು ತಮ್ಮ ಉತ್ತಮ ಗಾಯನ ತರಬೇತಿಯೊಂದಿಗೆ ಹಲವಾರು ಗಾಯಕ ಗಾಯಕಿಯನ್ನು ಪರಿಚಯಿಸಿಕೊಟ್ಟಿದ್ದಾರೆ.
- Advertisement -