- Advertisement -
- Advertisement -




ನರಿಕೊಂಬು : ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಉದ್ಯೋಗಿ ಬಾಬುಪೂಜಾರಿ (77 ) ನರಿಕೊಂಬುವಿನ ಸ್ವಗೃಹದಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಇವರು ವಿಟ್ಲ ಮತ್ತು ಪರಿಯಲ್ತಡ್ಕ ಶಾಖೆಯಲ್ಲಿ ಸೇವೆ ಸಲ್ಲಿಸಿ ದ್ದಾರೆ.
ಪಿ.ಬಿ. ಶ್ರೀನಿವಾಸ್ ಕಂಠ ಸಿರಿಯನ್ನು ಹೋಲುವ ಹಾಡುಗಳನ್ನು ಆರ್ಕೆಷ್ಟೃದಲ್ಲಿ ಹಾಡಿ ಜನಮನ್ನಣೆ ಗಳಿಸಿದ್ದರು. ನಾಟಕಗಳಲ್ಲಿ ತುಳು ಕನ್ನಡ ಹಾಡುಗಳ ಗಾಯಕರಾಗಿ ಕೆಲವು ದಶಕಗಳ ಸೇವೆ ಸಲ್ಲಿಸಿದ್ದಾರೆ. ವಿದೇಶದಲ್ಲೂ ತಮ್ಮ ಕಂಠ ಸಿರಿಯನ್ನು ಪರಿಚಯಿಸಿದ್ದು, .A B Vittal, Babla ಮತ್ತು ಬಾಬಣ್ಣ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು.
- Advertisement -