- Advertisement -
- Advertisement -







ಉಪ್ಪಿನಂಗಡಿ: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಸವಾರರು ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಗೋಳಿತ್ತೊಟ್ಟುನಲ್ಲಿ ನಡೆದಿದೆ.
ಗಾಯಗೊಂಡವರನ್ನು ಅಂಬ್ರಾಜೆ ನಿವಾಸಿ ಚಂದ್ರಶೇಖರ ಹಾಗೂ ಅವರ ಮಗ ತೇಜಸ್ ಮತ್ತು ಪಟೇರಿ ನಿವಾಸಿ ಪ್ರಕಾಶ್ ಕೆ.ಎನ್ ಎಂದು ಗುರುತಿಸಲಾಗಿದೆ.
ಅಂಬ್ರಾಜೆ ನಿವಾಸಿ ಚಂದ್ರಶೇಖರ ಹಾಗೂ ಅವರ ಮಗ ತೇಜಸ್ ಸಂಚಾರ ಮಾಡುತ್ತಿದ್ದ ದ್ವಿಚಕ್ರ ವಾಹನ ಹಾಗೂ ಪಟೇರಿ ನಿವಾಸಿ ಪ್ರಕಾಶ್ ಕೆ.ಎನ್ ಎಂಬವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಕಾಶ್ ಕೆ.ಎನ್. ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಚಂದ್ರ ಶೇಖರ ಹಾಗೂ ಅವರ ಮಗ ತೇಜಸ್ ಸಣ್ಣ ಪುಟ್ಟ ಗಾಯಗೊಂಡಿದ್ದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆ ಹಾಗೂ ಪುತ್ತೂರು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Advertisement -