- Advertisement -
- Advertisement -


ಬೆಳ್ತಂಗಡಿ: ರಿಕ್ಷಾ ಚಾಲಕನೋರ್ವರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಮಂಜ ಗ್ರಾಮದ ಅಕ್ಷಯನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ ಅಕ್ಷಯನಗರ ನಿವಾಸಿ ಪ್ರಮೋದ್ ಗೌಡ (35) ಎಂದು ಗುರುತಿಸಲಾಗಿದೆ.
ಪ್ರಮೋದ್ ಗುರುವಾರ ರಾತ್ರಿ ಊಟ ಮುಗಿಸಿ ಕಬಡ್ಡಿ ಪಂದ್ಯಾಟ ವೀಕ್ಷಣೆಯನ್ನು ಮಾಡುತ್ತಿದ್ದರು. ಇವರ ತಂದೆ ಮೋನಪ್ಪ ಗೌಡ ಊಟ ಮಾಡಿ ಮಲಗಿದ ನಂತರ ಸುಮಾರು ಹೊತ್ತಿನವರೆಗೂ ಟಿವಿ ಚಾಲನೆಯಲ್ಲೆ ಇತ್ತು. ರಾತ್ರಿ ಸುಮಾರು 12:00 ಗಂಟೆಗೆ ಟಿವಿ ಆಫ್ ಮಾಡಲು ಬಂದಾಗ ಪ್ರಮೋದ್ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
- Advertisement -