- Advertisement -
- Advertisement -


ಬೀದರ್: ಎರಡು ಬೈಕ್ಗಳ ನಡುವೆ ಅಪಘಾತ ನಡೆದಿದ್ದು ಯುವಕನೋರ್ವ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಬಸವನಗರದ ಹತ್ತಿರ ನಡೆದಿದೆ.
ಮೃತಪಟ್ಟ ಯುವಕ ಕುಂಟೆಸಿರ್ಸಿ ಗ್ರಾಮದ ನಿವಾಸಿ ಮಹೇಶ್ (22) ಹಾಗೂ ಗಾಯಗೊಂಡ ವ್ಯಕ್ತಿ ನಾವದಗಿ ಗ್ರಾಮದ ನಿವಾಸಿ ವಿವೇಕಾನಂದ (36) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಮಹೇಶ್ ಭಾಲ್ಕಿಯಿಂದ ತನ್ನ ಗ್ರಾಮವಾದ ಕುಂಟೆಸಿರ್ಸಿಗೆ ತೆರಳುತಿದ್ದ. ವಿವೇಕಾನಂದ ಎಂಬಾತ ಎದುರಿನಿಂದ ಬರುತ್ತಿದ್ದನು. ಈ ಸಮಯದಲ್ಲಿ ಎರಡು ಬೈಕ್ಗಳು ಮುಖಾಮುಖಿ ಢಿಕ್ಕಿಯಾಗಿವೆ. ಮಹೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ವಿವೇಕಾನಂದನನ್ನು ಬೀದರ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -