Sunday, June 29, 2025
spot_imgspot_img
spot_imgspot_img

ಉಡುಪಿ: ವಾರದ ಹಿಂದೆ ನಾಪತ್ತೆಯಾಗಿದ್ದ ಹೊಟೇಲ್ ಮಾಲಕ ಪತ್ತೆ..!

- Advertisement -
- Advertisement -

ಉಡುಪಿ: ವಾರದ ಹಿಂದೆ ನಾಪತ್ತೆಯಾಗಿದ್ದ ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲಕ ಅಜಿತ್ ಕುಮಾರ್ ಪತ್ತೆಯಾಗಿದ್ದಾರೆ.

ಮನನೊಂದ ಕಾರಣ ತಿರುಪತಿ ತಿಮ್ಮಪ್ಪ ದೇವರ ದರ್ಶನಕ್ಕೆಂದು ಯಾರಿಗೂ ತಿಳಿಸದೆ ತೆರಳಿರುವುದಾಗಿ ಅವರು ಉಡುಪಿ ನಗರ ಠಾಣೆಗೆ ತಿಳಿಸಿದ್ದಾರೆ.

ಎ.12ರಂದು ಸಂಜೆ ತಿಂಡಿಯನ್ನು ಪಾರ್ಸೆಲ್ ನೀಡಲೆಂದು ಸ್ಕೂಟರ್‌ನಲ್ಲಿ ಹೋದವರು ವಾಪಸ್ ಬಂದಿರಲಿಲ್ಲ. ಪತ್ನಿ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದ ಪರಿಣಾಮ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

- Advertisement -

Related news

error: Content is protected !!