- Advertisement -
- Advertisement -
ಪಾಟ್ನ: ಗಯಾ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ. ಸಾವನ್ನಪ್ಪಿದ ನಕ್ಸಲ್ ತಂಡದ ಸದಸ್ಯನನ್ನು ಅಲೋಕ್ ಎಂದು ಗುರುತಿಸಲಾಗಿದೆ.
ನಕ್ಸಲ್ ಅಲೋಕ್ ಬಂಧನಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿತ್ತು. ಗಯಾದಲ್ಲಿ ಎರಡು ದಿನಗಳ ಹಿಂದೆ ಇಬ್ಬರು ನಾಗರಿಕರನ್ನು ಅಲೋಕ್ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿತ್ತು. ಗಯಾ ಜಿಲ್ಲೆಯ ಮೆಹೂರಿ ಗ್ರಾಮದಲ್ಲಿ ನಕ್ಸಲ್ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ. ನಕ್ಸಲ್ ತಂಡದ ಇತರ ಸದಸ್ಯರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
- Advertisement -