


ಕಾಂಗ್ರೆಸ್ ರಾಜ್ಯ ಸರ್ಕಾರದ ದುರಾಡಳಿತ ವಿರುದ್ಧ ಭಾರತೀಯ ಜನತಾ ಪಾರ್ಟಿ ವಿಟ್ಲ ಮುಡ್ನೂರು ಶಕ್ತಿ ಕೇಂದ್ರದ ವತಿಯಿಂದ ಗ್ರಾಮ ಪಂಚಾಯತ್ ಎದುರುಗಡೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರ್ ರಾಜ್ಯ ಸರ್ಕಾರವು ಮಾಡುತ್ತಿರುವ ದುರಾಡಳಿತದ ಬಗ್ಗೆ, ವಿದ್ಯುತ್ ಬೆಲೆ ಏರಿಕೆ ಬಗ್ಗೆ, ಪಂಚಾಯತ್ ರಾಜ್ ವ್ಯವಸ್ಥೆಯ ದುರಾವಸ್ಥೆಯ ಬಗ್ಗೆ, ಅಲ್ಪಸಂಖ್ಯಾತರ ಓಲೈಕೆಯ ಬಗ್ಗೆ ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಮುಖ ಭಾಷಣವನ್ನು ಮಾಡಿದ ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲರವರು 9/11 ಸಮಸ್ಯೆಯ ಬಗ್ಗೆ, ಅಕ್ರಮ ಸಕ್ರಮ ಅರ್ಜಿಯ ತಿರಸ್ಕಾರ, ಆಶ್ರಯ ಮನೆಗಳನ್ನು ನೀಡದೆ ಇರುವುದು, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳನ್ನು, ಕಾರ್ಮಿಕರ ವಿದ್ಯಾರ್ಥಿ ವೇತನಗಳನ್ನು ನೀಡದೆ ಇರುವುದರ ಬಗ್ಗೆ, ಕೆಂಪು ಕಲ್ಲು , ಮರಳು ನಿಷೇಧದ ಮೂಲಕ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟ ಆಡುವ ಕಾಂಗ್ರೆಸ್ನ ದುರಾಡಳಿತದ ಬಗ್ಗೆ ಮಾತನಾಡಿದರು. ಪ್ರತಿಭಟನೆಯ ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ತೀರ್ಥರಾಮ ಗೌಡ, ಪ್ರೇಮಲತಾ ಪಟ್ಲ, ಪಂಚಾಯತ್ ಉಪಾಧ್ಯಕ್ಷೆ ರೋಹಿಣಿ, ಸದಸ್ಯರಾದ ಚಂದ್ರಾವತಿ, ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕ ದಿನೇಶ್ ಕೋಡಿಬೈಲ್, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಪ್ರಮುಖರಾದ ಪದ್ಮನಾಭ ಶೆಟ್ಟಿ ಚೆಪ್ಪುಡಿಯಡ್ಕ, ಯತೀಶ್ ಬೇರಿಕೆ, ಗಿರೀಶ್ ಹಡೀಲ್, ರಾಜೇಶ್ ಪೊಯ್ಯೆ, ಪ್ರವೀಣ್ ಶೆಟ್ಟಿ, ನೇಮು ಅಗಸರಪಾಲು , ಪ್ರವೀಣ್ ಮಾಡತ್ತಡ್ಕ, ಜಗದೀಶ್ ಧರ್ಮನಗರ, ಕಿಶೋರ್ ಆಲಂಗಾರ್, ದೇವಪ್ಪ ಆಲಂಗಾರ್, ಸಂಧ್ಯಾ ಪಟ್ಲ, ವಿಶಾಲಾಕ್ಷಿ, ಚಂದ್ರಶೇಖರ ಗಿರಿನಿವಾಸ, ಪ್ರವೀಣ್ ಕಟ್ಟತ್ತಿಲ, ಆದಿತ್ಯ ಆಲಂಗಾರ್, ಬಾಲಕೃಷ್ಣ ಹಡೀಲ್, ಪ್ರವೀಣ್ ಹಡೀಲ್ , ಧನಂಜಯ ಆಲಂಗಾರ್ ಉಪಸ್ಥಿತರಿದ್ದರು.
ಶಕ್ತಿಕೇಂದ್ರದ ನಿಕಟಪೂರ್ವ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರಿಶ್ಚಂದ್ರ ನಾಯಕ್ ವಂದಿಸಿದರು. ಶಕ್ತಿ ಕೇಂದ್ರ ಸಂಚಾಲಕ ಯಶೋಧರ ಪಟ್ಲ ಕಾರ್ಯಕ್ರಮ ನಿರ್ವಹಿಸಿದರು.