ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು -ಶಂಭೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನರಿಕೊಂಬು ಶಂಭೂರು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆಯ ಬಿಡುಗಡೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷರಾದ ಪದ್ಮನಾಭ ರೈ, ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್, ತಾಲೂಕು ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ ಹಾಗೂ ಉಸ್ಮಾನ್ ಕರೋಪಾಡಿ,ವಲಯ ಅಧ್ಯಕ್ಷರಾದ ಮಾಧವ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಲ್ಬರ್ಟ್ ಮೆನೇಜಸ್, ಪುರಸಭಾ ಸದಸ್ಯರಾದ ಜನಾರ್ದನ್ ಚಂಡ್ತಿಮಾರ್.
ರವೀಂದ್ರ ಸಪಲ್ಯ,ವಿಶ್ವನಾಥ್ ಪೂಜಾರಿ, ಆನಂದ ಸಾಲಿಯಾನ್ ಶಂಭೂರು, ಶ್ರೀಮತಿ ಬೇಬಿ ಕೃಷ್ಣಪ್ಪ ಗಾಣಿಗ, ದಿವಾಕರ ಅಬೇರೊಟ್ಟು, ಗಣೇಶ್, ಮಹಮ್ಮದ್ ರಿಯಾಝ್, ಅರುಣ್ ಶೆಟ್ಟಿ ಅಂತರ, ಶ್ರೀಮತಿ ಭಾರತಿ ಪ್ರಶಾಂತ್, ಸತೀಶ್ ಕೋಟ್ಯಾನ್, ಸುಜಯ್ ಮಾಣೆಮಜಲು, ಮಹಮ್ಮದ್ ಪೈರೋಝಿ, ಆನಂದ ನಾಯ್ಕ ಮಾರುತಿಗನರ, ರಾಜೇಶ್ ಕೋಟ್ಯಾನ್,ಉಮೇಶ್ ನಾಯ್ಕ, ಆನಂದ ಬೋಂಡಾಲಡ್ಕ, ಸಿಸಿಲಿಯಾ ವಿಲ್ಫೆಡ್ ಪಿಂಟೋ, ದಾಮೋದರ ನಾಯಿಲ, ಅಬೂಬಕ್ಕರ್ ಉಪ್ಪುಗುಡ್ಡೆ,ಶಬೀರ್, ಅಹಮ್ಮದ್ ಉಪ್ಪುಗುಡ್ಡೆ, ಕೃಷ್ಣಪ್ಪ ಪೂಜಾರಿ ನಾಟಿ ಉಪಸ್ಥಿತರಿದ್ದರು.