ಚಿಕ್ಕಮಂಗಳೂರು: Lions Clubs Internationalಗೆ ಒಳಪಟ್ಟ ಲಯನ್ಸ್ ಜಿಲ್ಲೆ 317D ಯ ಮೂರನೇ ಸಂಪುಟ ಸಭೆಯು ಲಯನ್ಸ್ ಜಿಲ್ಲೆ ರಾಜ್ಯಪಾಲ ಅರವಿಂದ ಶೆಣೈ ಅವರ ಅಧ್ಯಕ್ಷತೆಯಲ್ಲಿ ಚಿಕ್ಕಮಂಗಳೂರಿನ ಲಯನ್ಸ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ ಅವರು ವರದಿ ಮಂಡಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ ಅವರು ಲೆಕ್ಕಪತ್ರವನ್ನು ಸಭೆಗೆ ಸಲ್ಲಿಸಿದರು. ವಿವಿಧ ಘಟಕಗಳ ಕಾರ್ಯಚಟುವಟಿಕೆಗಳ ಪರಿಶೀಲನೆ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಯಿತು.ಸಭೆಯಲ್ಲಿ ಪ್ರಥಮ ಉಪರಾಜ್ಯಪಾಲ ತಾರಾನಾಥ್ ಎಚ್.ಎಂ., ದ್ವಿತೀಯ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ಸಂಪುಟ ಸಂಯೋಜಕಿ ನ್ಯಾನ್ಸಿ ಮಸ್ಕ್ ರೇನಿಯಸ್, ರಾಜ್ಯಪಾಲರ ಸಂಯೋಜಕಿ ಜ್ಯೋತಿ ಎಸ್. ಶೆಟ್ಟಿ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ (ವಿಟ್ಲ), ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ ಸೇರಿದಂತೆ ಮಾಜಿ ರಾಜ್ಯಪಾಲರು, ಸಂಪುಟ ಸದಸ್ಯರು ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಚಿಕ್ಕಮಂಗಳೂರು ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎಸ್. ಅವರು ಸ್ವಾಗತಿಸಿದರು. ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ ವಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಗವರ್ನರ್ಗಳಾದ ವಸಂತ್ ಕುಮಾರ್ ಶೆಟ್ಟಿ ಬಿ.ವಿ. ಹೆಗಡೆ, ಮಂಜುನಾಥ ಮೂರ್ತಿ, ಕೆ.ಸಿ. ಪ್ರಭು, ಎಚ್.ಆರ್. ಹರೀಶ್, ಸಿಮೋನ್, ಡಾ. ಗೀತಾ ಪ್ರಕಾಶ್ ಹಾಗೂ ಅಲ್ವಿನ್ ಪತ್ರಾವೋ ಅವರನ್ನು ಚಿಕ್ಕಮಂಗಳೂರು ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.








