ಉದ್ಯಮಿಯೊಬ್ಬರ ಕೊಲೆ ಸಂಚು ರೂಪಿಸಲು ಐವರು ದುಷ್ಕರ್ಮಿಗಳು ಇಲ್ಲಿನ ಐಷಾರಾಮಿ ಹೊಟೇಲ್ಗೆ ಆಗಮಿಸಿದರು. ಅಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದರು. ರೂಂ ಕೀ ಪಡೆದುಕೊಂಡು ಒಳಸೇರಿದ ಅವರು, ರಿಸಪ್ಶನ್ಗೆ ಕರೆ ಮಾಡಿ ಕಾಲ್ ಗರ್ಲ್ನ್ನು ಕಳುಹಿಸಿಕೊಡುವಂತೆ ಸೂಚಿಸಿದರು. ಇಲ್ಲಿ ಅಂತಹ ಸೇವೆ ಇಲ್ಲ ಎಂದು ರಿಸಪ್ಶನ್ ಸ್ಟಾಫ್ ಖಡಕ್ ಆಗಿ ಹೇಳಿಬಿಡುತ್ತಾರೆ.
ಇದರಿಂದ ಆಕ್ರೋಶಗೊಂಡ ಈ ದುಷ್ಕರ್ಮಿಗಳ ಪಡೆ ಮಹಿಳಾ ಸಿಬ್ಬಂದಿಯ ರೆಸ್ಟ್ ರೂಂಗೆ ನುಗ್ಗಿ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ. ಗನ್ ತೋರಿಸಿ ಈ ಹೀನ ಕೃತ್ಯ ನಡೆಸಿದರು. ಈ ಮಧ್ಯೆ, ಹೊಟೇಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿದರು.
ತಕ್ಷಣ ಹೊಟೇಲ್ಗೆ ಆಗಮಿಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿ ದುಷ್ಕರ್ಮಿಗಳ ತಂಡವನ್ನು ಬಂಧಿಸಿದರು. ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೇರ್ ಮತ್ತು ಪ್ರಿನ್ಸ್ ತಿವಾರಿ ಬಂಧಿತ ಆರೋಪಿಗಳು.
ಬಂಧಿತರ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮತ್ತೊಂದು ಸ್ಫೋಟಕ ಮಾಹಿತಿ ತಿಳಿಯುತ್ತದೆ. ಅದೇನೆಂದರೆ, ಅವರು ಬಂದಿರುವುದು ಉದ್ಯಮಿಯೊಬ್ಬರ ಕೊಲೆಗೆ… ಇದಕ್ಕಾಗಿ ಈ ಪಾಪಿಗಳ ತಂಡ 20 ಲಕ್ಷ ರೂ.ಗಳ ಸುಪಾರಿಯನ್ನು ಪಡೆದಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.