Tuesday, April 30, 2024
spot_imgspot_img
spot_imgspot_img

ವಿಟ್ಲ :ಕೊಳ್ನಾಡು ಪ್ರೀತಿ ತಿರಸ್ಕರಿಸಿದಕ್ಕೆ ಮನೆಗೆ ಅಕ್ರಮ ಪ್ರವೇಶ ಮಾಡಿ ಮಾನಭಂಗಕ್ಕೆ ಯತ್ನ-ತಡೆಯಲು ಹೋದ ಚಿಕ್ಕಪ್ಪನಿಗೆ ಚೂರಿ ಇರಿತ!

- Advertisement -G L Acharya panikkar
- Advertisement -

ವಿಟ್ಲ : ಕೊಳ್ನಾಡು ಗ್ರಾಮದ ಸುರಿಬೈಲು ಎಂಬಲ್ಲಿ ಅಕ್ರಮವಾಗಿ ಮನೆಗೆ ನುಗ್ಗಿ ಹುಡುಗಿಯ ಕೈ ಹಿಡಿದು ಎಳೆದು ಮಾನಭಂಗಕ್ಕೆ ಪ್ರಯತ್ನಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.ಇರ್ಫಾನ್‌ ಎಂಬವನು ತನ್ನ ಪಕ್ಕದ ಮನೆಯ ಫಾತಿಮತ್‌ ಸುಬುಹಾನ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದು ಅದಕ್ಕೆ ಅವಳು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಇರ್ಫಾನ್‌ ನಿನ್ನೆ ರಾತ್ರಿ 10.30 ರ ಸಮಯದಲ್ಲಿ ಕೊಳ್ನಾಡು ಗ್ರಾಮದ ಸುರಿಬೈಲು ಎಂಬಲ್ಲಿ ವಾಸವಾಗಿದ್ದ ಅಬ್ದುಲ್‌ ರಹಿಮಾನ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆಯಲ್ಲಿದ್ದ ಫಾತಿಮತ್‌ ಸುಬುಹಾನ(20)ಎಂಬ ಹುಡುಗಿಯನ್ನು ಕೈ ಹಿಡಿದು ಎಳೆದು ಮಾನಭಂಗಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ.

ಆಗ ಹುಡುಗಿಯ ತಂದೆ ಅಬ್ದುಲ್‌ ರಹಿಮಾನ್ ರವರು ತಡೆಯಲು ಹೋಗಾಗ ಅವರಿಗೆ ಇರ್ಫಾನ್ ಕೈಯಿಂದ ಹಲ್ಲೆ ನಡೆಸಿ ಪಕ್ಕದಲ್ಲಿದ್ದ ಅಬ್ದುಲ್‌ ರಹಿಮಾನ್ ರವರ ತಮ್ಮ ಯೂಸೂಫ್‌ ಎಂಬವರ ಬೆನ್ನಿಗೆ ಚೂರಿಯಿಂದ ಚುಚ್ಚಿರುತ್ತಾನೆ.ಮತ್ತು ಮನೆಯವರಿಗೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿರುತ್ತಾನೆ.ಗಾಯಗೊಂಡ ಯೂಸೂಫ್‌ ರವರನ್ನು ತುಂಬೆಯ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಈ ಪ್ರಕರಣವು ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

- Advertisement -

Related news

error: Content is protected !!