- Advertisement -
- Advertisement -
ಪುತ್ತೂರು ಶಾಸಕರ ವಿರುದ್ದ ಬಿಜೆಪಿ ದಕ್ಷಿಣ ಕನ್ನಡ ಗಂಭೀರ ಆರೋಪ…!

ಪುತ್ತೂರು: ಶರ್ಟಿನಲ್ಲಿ 5 ಮೈಕ್ ಧರಿಸಿದರೂ, ಕ್ಷೇತ್ರದಲ್ಲಿ ಪದೇಪದೇ ನಡೆಯುವ ಮತಾಂಧರ ಅಟ್ಟಹಾಸದ ಕೃತ್ಯವನ್ನು ಕಂಡೂ ಕಾಣದಂತೆ ಖಂಡಿಸಿದ Indian National Congress – Karnataka ದ “ದಿಮಾಗಿ ನಕ್ಸಲ್” ಕುತ್ಸಿತ ಮನಸ್ಥಿತಿಯ ಗ್ಯಾರಂಟಿ ಲೋಕಾರ್ಪಣೆಗೊಂಡಿದೆ.
ಇದು ಮುಸ್ಲಿಮರ ಸರ್ಕಾರ ಎಂದವರು ಇಂದು ಸಿಎಂ ಆಗಿದ್ದಾರೆ, ಅದೇ ಮತಾಂಧರು ಇಂದು ಪೊಲೀಸ್ ಜೀಪ್ನೊಳಗೆ ನುಗ್ಗಿ ಅಮಾಯಕರಿಗೆ ಹಲ್ಲೆ ನಡೆಸುವಷ್ಟು ಮುಂದುವರೆದಿದ್ದಾರೆ. ಕೈ ಸರ್ಕಾರದ ಮತೀಯ ಓಲೈಕೆಗೆ ಹಿಂದೂ ಸಮಾಜ ಬಲಿಯಾಗುತ್ತಿದೆ.
ಕೇಕ್ ಕಟ್ ಮಾಡುವ ಚೂರಿಗೆ ಮಿಡಿದ ಹೃದಯಗಳು, ಹತ್ತಾರು ಮತಾಂಧರಿಂದ ಹಲ್ಲೆಗೊಳಗಾದ ಹಿಂದೂಗಳ ಬಗ್ಗೆ ಮೌನವಹಿಸಿದೆ. ಕಾಂಗ್ರೆಸ್ನ ಸ್ಥಳೀಯ ಪಿಸ್ತೂಲ್ ಶಾಸಕ ಅಶೋಕ್ ರೈ ಅವರಿಗೆ ಈಗ ಫ್ಯಾಕ್ಟ್ ಚೆಕ್ ವಿಡಿಯೋ ಮಾಡಲು ಸಮಯವಿಲ್ಲವೇ? ಎಂದು ಬಿಜೆಪಿ ದಕ್ಷಿಣ ಕನ್ನಡ ತನ್ನ ಫೇಸ್ಬುಕ್ ಖಾತೆಯ ಪೋಸ್ಟ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
- Advertisement -








