- Advertisement -
- Advertisement -
ಹೈದರಾಬಾದ್: ಬಹು ರಾಷ್ಟ್ರೀಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಸಾಪ್ಟ್ ವೇರ್ ಇಂಜಿನಿಯರ್ ಒಬ್ಬನನ್ನು ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆರೋಪಿಯನ್ನು ಜಿ ರಾಮಕೃಷ್ಣ ಎಂದು ಗುರುತಿಸಲಾಗಿದೆ.
ಜನವರಿ 7 ರಂದು 60 ವರ್ಷ ಪ್ರಾಯದ ಮಹಿಳೆಯ ಸರ ಕಸಿದು ಪರಾರಿಯಾದ ಪ್ರಕರಣದಲ್ಲಿ ರಾಮಕೃಷ್ಣನನ್ನು ಬಂಧಿಸಲಾಗಿದೆ. ಸರ ಕಳ್ಳತನ ಮಾಡಿದ ಬಳಿಕ ರಸ್ತೆ ಬದಿಯಲ್ಲಿ ಆರೋಪಿ ಉಡುಪು ಬದಲಾಯಿಸಿದ್ದ. ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾದ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಮುಶಿರಾಬಾದ್ ಮನೆಯಿಂದ ಬಂಧಿಸಲಾಯಿತು.
- Advertisement -