Tuesday, June 23, 2026
spot_imgspot_img
spot_imgspot_img

ಪೆರುವಾಯಿ–ಪೇರಡ್ಕ ಸೇತುವೆಯ ಪುನರ್‌ನಿರ್ಮಾಣಕ್ಕೆ ಆಗ್ರಹ

- Advertisement -
- Advertisement -

ಕೆಂಪು ಕಲ್ಲು ಲಾರಿ ಚಾಲಕರಿಂದ ನಾಳೆ ಕಲ್ಲು ಸಾಗಾಟ ಸ್ಥಗಿತ ಪ್ರತಿಭಟನೆಗೆ ಬೆಂಬಲ

ವಿಟ್ಲ: ಪೆರುವಾಯಿ–ಪೇರಡ್ಕ ಸೇತುವೆಯ ಪುನರ್‌ನಿರ್ಮಾಣಕ್ಕೆ ಆಗ್ರಹಿಸಿ ನಿನ್ನೆ ನಡೆದ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕೇರಳ ಹಾಗೂ ಬೆರಿಪದವು ಭಾಗದಿಂದ ಆಗಮಿಸುವ ಕೆಂಪು ಕಲ್ಲು ಲಾರಿ ಚಾಲಕ-ಮಾಲಕರು ಜೂನ್ 24ರ ಬುಧವಾರ ಕಲ್ಲು ಸಾಗಾಟವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಸೇತುವೆಯ ದುರವಸ್ಥೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಶೀಘ್ರದಲ್ಲಿ ಸೇತುವೆ ಪುನರ್‌ನಿರ್ಮಾಣ ಕಾರ್ಯ ಆರಂಭಿಸಬೇಕೆಂದು ಆಗ್ರಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲು ಸಾಗಾಟ ಸ್ಥಗಿತಗೊಳಿಸುವ ಮೂಲಕ ಲಾರಿ ಚಾಲಕ –ಮಾಲಕರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!