- Advertisement -
- Advertisement -
ವಿಟ್ಲ: ಫೆ.5 ರಿಂದ 6 ರವರೆಗೆ ಕಡಂಬು ಬಾಳಿಕೆ ಧರ್ಮ ಚಾವಡಿಯಲ್ಲಿ ಕುಂಟುಕುಡೇಲು ಶ್ರೀ ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ದೈವಗಳ ಕೆಂಡಸೇವೆ, ನೃತ್ತಸೇವೆ, ಕೋಲ ನಡೆಯಲಿದೆ.
ಫೆ. 5 ರಂದು ಬೆಳಿಗ್ಗೆ ಗಣಪತಿ ಹವನ ನಡೆಯಲಿದೆ. ದೈವಗಳ ತಂಬಿಲ ಸೇವೆ ನಡೆದು, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಪ್ರಸಾದ ಭೋಜನದ ಬಳಿಕ ಕೊರತಿ ದೈವದ ನೃತ್ತ ನಡೆಯಲಿದೆ. ಬಳಿಕ ರಕ್ತೇಶ್ವರಿ ದೈವದ ನೃತ್ತ ಮತ್ತು ಕೆಂಡ ಸೇವೆ ನೆರವೇರಲಿದೆ.
ಫೆ.6 ರಂದು ಬೆಳಗ್ಗೆ ಗುಳಿಗ ದೈವದ ನೃತ್ತ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಅರಸು ಮನೆತನದವರು ಹಾಗೂ ಆಡಳಿತ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -