Sunday, June 29, 2025
spot_imgspot_img
spot_imgspot_img

ಕಡಬ: ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ತಮಿಳುನಾಡಿನ ಮಧುರೈನಲ್ಲಿ ಪತ್ತೆ

- Advertisement -
- Advertisement -

ಕಡಬ: ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದ ಐತ್ತೂರು ಗ್ರಾಮದ ತಮಿಳು ಕಾಲನಿಯ ನಿವಾಸಿ ಜಗದೀಶ್‌ ರವರ ಅಪ್ರಾಪ್ತ ವಯಸ್ಸಿನ ಪುತ್ರಿಯನ್ನು ತಮಿಳುನಾಡಿನ ಮಧುರೈನಲ್ಲಿ ಪತ್ತೆ ಮಾಡಿರುವ ಪೊಲೀಸರು ಕಡಬಕ್ಕೆ ಕರೆತಂದಿದ್ದಾರೆ.

ಸುಳ್ಯ ಆರಕ್ಷಕ ಠಾಣೆಯ ಅಪರಾಧ ವಿಭಾಗದ ಎಸ್‌ಐ ರತನ್‌ಕುಮಾರ್‌ ಹಾಗೂ ಕಡಬ ಠಾಣೆ ಸಿಬ್ಬಂದಿ ಮಂಜುನಾಥ್‌ ರವರು ತಮಿಳುನಾಡಿಗೆ ತೆರಳಿ ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‌ಪೆಕ್ಟರ್‌ಗಳಾದ ರವಿ ಬಿ.ಎಸ್‌., ಚೆಲುವರಾಜ್‌, ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ದಿವಾಕರ್‌ ಹಾಗೂ ಸಂಪತ್‌ ರವರ ಸಹಕಾರದೊಂದಿಗೆ ಬಾಲಕಿಯನ್ನು ಪತ್ತೆ ಮಾಡಿ ಕಡಬ ಠಾಣೆಗೆ ಕರೆ ತಂದಿದ್ದರು.

ಬಳಿಕ ಆಕೆಯನ್ನು ಆಕೆಯ ಹೆತ್ತವರ ಜತೆಗೆ ಮನೆಗೆ ಕಳುಹಿಸಿಕೊಡಲಾಯಿತು ಎಂದು ಕಡಬ ಠಾಣೆ ಎಸ್‌ಐ ರುಕ್ಮ ನಾಯ್ಕ್‌ ರವರು ತಿಳಿಸಿದ್ದಾರೆ. ಯುವತಿ ತಾನಾಗಿಯೇ ತಮಿಳುನಾಡಿಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

Related news

error: Content is protected !!