Saturday, June 28, 2025
spot_imgspot_img
spot_imgspot_img

ವಿಟ್ಲ : ಕಾರಿಗೆ ಡಿಕ್ಕಿ ಹೊಡೆದ ಜೀಪ್ – ಜೀಪ್ ಚಾಲಕನ ವಿರುದ್ಧ ಕೇಸು ದಾಖಲು

- Advertisement -
- Advertisement -

ವಿಟ್ಲ : ಕನ್ಯಾನ ಮರ್ತನಾಡಿ ನಿವಾಸಿ ಶ್ರುತಿ ಶೆಟ್ಟಿ ಎಂಬವರು ಫೆ.23 ರಂದು ಬೆಲೋನೋ ಕಾರಿನಲ್ಲಿ ತಮ್ಮ ಮನೆಯಿಂದ ಹೊರಟು ಮಂಗಳೂರು ಕಡೆಗೆ ಹೋಗುತ್ತಿರುವಾಗ ಕನ್ಯಾನದ ರಾಘವೇಂದ್ರ ಭಜನಾ ಮಂದಿರದ ಬಳಿ

ಕನ್ಯಾನ ಪೇಟೆ ಕಡೆಯಿಂದ ನೆಲ್ಲಿ ಕಡೆಗೆ ಹೋಗುತ್ತಿದ್ದ ಜೀಪ್ ಚಾಲಕ ಅಜಾಗರೂಕತೆಯಿಂದ ಜೀಪನ್ನು ಚಲಾಯಿಸಿ ಕಾರಿಗೆ ತಾಗಿಸಿ ಅಪಘಾತ ಉಂಟು ಮಾಡಿದ್ದಾನೆ. ಕಾರಿನಲ್ಲಿ ಶ್ರುತಿಯವರ ಪತಿ ಆಶೀತ್ ಭಂಡಾರಿ, ಮೈದುನ ಹಾಗೂ ಮೈದುನನ ಹೆಂಡತಿ ಇದ್ದರು.

ಕಾರು ಅಪಘಾತಗೊಂಡ ಪರಿಣಾಮ ನಷ್ಟ ಉಂಟಾಗಿದೆ ಎಂದು ಶ್ರುತಿ ಶೆಟ್ಟಿಯವರು ರುಕ್ಮಯ್ಯ ಗೌಡ ಎಂಬವರ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

- Advertisement -

Related news

error: Content is protected !!