Saturday, July 5, 2025
spot_imgspot_img
spot_imgspot_img

ಕೊಟ್ಟಿಗೆಗೆ ವ್ಯಾಪಿಸಿದ ಬೆಂಕಿ – ಗೋವು ರಕ್ಷಿಸಿ ಗೋಪಾಲಕ ಸಾವು

- Advertisement -
- Advertisement -

ನೆಲಮಂಗಲ: ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿ ಹಸು ರಕ್ಷಣೆಗೆ ತೆರಳಿದ್ದ ಗೋಪಾಲಕ ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೇಕೆರೆಯಲ್ಲಿ ನಡೆದಿದೆ.

ಲೋಕೇಶ್ ಮೃತಪಟ್ಟ ಗೋಪಾಲಕ. ಮನೆಯ ನೀರು ಕಾಯಿಸುವ ಒಲೆಯಿಂದ ವ್ಯಾಪಿಸಿದ ಅಗ್ನಿ ಅವಘಡ ಇಡೀ ಕೊಟ್ಟಿಗೆ ಮನೆಗೆ ವ್ಯಾಪಿಸಿದೆ.ಬೆಂಕಿ ಬಿದ್ದ ವಿಷಯ ತಿಳಿದು ಲೋಕೇಶ್‌ ಕೂಡಲೇ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಎಳೆದು ಹೊರ ತಂದಿದ್ದಾರೆ. ಈ ವೇಳೆ ನಾಲ್ಕು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

ಶೇ.90 ರಷ್ಟು ಲೋಕೇಶ್‌ ಅವರ ದೇಹ ಸುಟ್ಟು ಹೋಗಿತ್ತು. ಗಂಭೀರವಾಗಿದ್ದ ಲೋಕೇಶ್‌ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್‌ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!