Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ದನಕಳ್ಳರೆಂದು ಇಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

- Advertisement -
- Advertisement -

ಪಿಕ್‌ಅಪ್ ವಾಹನದಲ್ಲಿ ಸಂಬ0ಧಿಕರ ಮನೆಗೆ ಹೋಗಿ ಊಟ ಮಾಡಿ ವಾಪಸ್ ಬರುವಾಗ ದನ ಕಳ್ಳರೆಂದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿಯ ಮೇಲಂತಬೆಟ್ಟುವಿನಲ್ಲಿ ನಡೆದಿದೆ.]

ರಹಿಮಾನ್ ಹಾಗೂ ಮುಸ್ತಫಾ ಎಂಬುವವರು ಸವಣಾಲಿನ ಸಂಬ0ಧಿಕರ ಮನೆಗೆ ಊಟ ಮಾಡಲು ಬಂದಿದ್ದಾರೆ. ಬಂದು ವಾಪಸ್ ಆಗುವ ವೇಳೆ ಕೆಲವರು ಬೈಕ್ ಕಾರುಗಳಲ್ಲಿ ಬೆನ್ನಟ್ಟಿದ್ದಾರೆ. ಮೇಲಂತಬೆಟ್ಟು ಬರುತ್ತಿದ್ದಂತೆ ಅಡ್ಡಗಟ್ಟಿದ ಮಂದಿ ನೀವು ದನ ಕಳ್ಳರು ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದೀರಿ ಎಂದು ಅವ್ಯಾಚ ಪದಗಳಿಂದ ನಿಂದಿಸಿದ್ದಾರೆ. 50 ಕ್ಕೂ ಅಧಿಕ ಮಂದಿ ಇಬ್ಬರ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ಥರು ಹೇಳಿಕೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು ಗುಂಪು ಚದುರಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆ ಮಾಡಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!