- Advertisement -
- Advertisement -
ಮಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ
ಮಾರ್ಷೆಲ್ ಗಳನ್ನು ನೇಮಿಸಿಕೊಂಡು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲು ಮುಂದಾಗಿದೆ.
ಸಾಮಾಜಿಕ ಅಂತರ,ಮಾಸ್ಕ್ ಧರಿಸದ ವ್ಯಾಪಾರಿ ಮಳಿಗೆಗಳಲ್ಲಿ ,ಬಾರ್ ಗಳಲ್ಲಿ,ಮಾಲ್ ಗಳಲ್ಲಿ ದಿಢೀರ್ ಎಂಟ್ರಿ ಕೊಡುವ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.
ಅದರಂತೆ ಭಾನುವಾರ ಬಿಜೈ ಭೂಷಣ್ ಬಾರ್ ಗೆ ಎಂಟ್ರಿ ಕೊಟ್ಟ ಪಾಲಿಕೆ ಆಯುಕ್ತರು ಸಿಕ್ಕಾಪಟ್ಟೆ ರಷ್ ಕಂಡು ಕೆಂಡಾಮಂಡಲರಾದರು. ಯಾವುದೇ ಸಾಮಾಜಿಕ ಅಂತರ ಇಲ್ಲದೆ ಕುಡಿಯಲು ಸೇರಿದ ಜನ ಕಂಡು ಬಾರ್ ಗೆ ಬೀಗ ಹಾಕಿದ್ದಾರೆ. ಕೊರೊನಾ ಹೆಚ್ಚುತ್ತಿರುವ ಸಂದರ್ಭ ಕಾನೂನು ಪಾಲಿಸದ ಮಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
- Advertisement -