- Advertisement -
- Advertisement -
ವಿಟ್ಲ: ನಿರಂತರ ಮಳೆಯಿಂದಾಗಿ ಸಾಲೆತ್ತೂರು-ವಿಟ್ಲ-ಕಬಕ ರಸ್ತೆಗೆ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ.
ಸಾಲೆತ್ತೂರು-ಪುತ್ತೂರು ರಸ್ತೆಯ ಕುಡ್ತಮುಗೇರು, ರಾಧುಕಟ್ಟೆ, ಮೊದಲಾದ ಕಡೆಗಳಲ್ಲಿ ರಸ್ತೆಗೆ ಮಣ್ಣು ಕುಸಿದು ಬಿದ್ದಿತ್ತು. ಇನ್ನು ಮಳೆ ನೀರಿನಲ್ಲಿ ಬಂದ ಕೆಸರು ಮಣ್ಣು ರಸ್ತೆಯಲ್ಲಿ ನಿಂತಿದ್ದರಿಂದ ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆಯಾಗಿತ್ತು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಬಂಟ್ವಾಳ ಲೋಕೋಪಯೋಗಿ ಇಲಾಖೆ ತಕ್ಷಣವೇ ಮಣ್ಣುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
- Advertisement -