ಆದರೇ ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಮಾತನಾಡಲು ಬಾರದ ಮೂಕು ಪ್ರಾಣಿಗಳಾದ ಬೀದಿ ನಾಯಿಗಳು, ಆಕಳುಗಳು ದನಗಳು ಪಕ್ಷಿಗಳು ಅದರಲ್ಲೂ ವಿಶೇಷವಾಗಿ ನಿಯತ್ತಿಗೆ ಅನ್ವರ್ಥಕ ನಾಮವಾದ ಬೀದಿನಾಯಿಗಳ ಹಸಿವಿನ ಪಾಡನ್ನು ಕೇಳುವವರು ಯಾರು? ಶ್ರೀಮಂತರ ಮನೆಯ ನಾಯಿಗಳೆನೋ ವೈಭವೋಪೇತ ಬದುಕು ಬಾಳುತ್ತವೆ ಆದರೆ ಬಡ ಬೀದಿ ನಾಯಿಪಾಡು ಕೇಳುವವರು ಯಾರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.


ಈ ಕೊರೊನಾ ಸಂಕಷ್ಟದ ಕಾಲದಲ್ಲಿ ಬಡ ಹಸಿದ ಮನುಷ್ಯರಿಗೆ ಊಟ ನೀಡುವ ಸುಕೃತ ಕಾರ್ಯವೆಸಗಲು ತೀರ್ಮಾನಿಸಿದ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಇವರು ತಮ್ಮ 10 ಜನ ಗೆಳೆಯರ ಹಾಗು ಸಮಾನ ಮನಸ್ಕರೊಂದಿಗೆ ಜೊತೆಗೂಡಿ “Feed A stray Dog Feed The voiceless Just @ ₹20 ” ಎನ್ನುವ ಸಂಕಲ್ಪದೊಂದಿಗೆ ಕ್ರಿಯಾಶೀಲವಾಗಿ ಮತ್ತು ಸೃಜನಶೀಲವಾಗಿ ಯೋಚಿಸಿ ಚರ್ಚಿಸಿ ಬೀದಿ ನಾಯಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಜನರ ಸಹಕಾರದೊಂದಿಗೆ ಉಡುಪಿಯಲ್ಲಿ ಪ್ರತಿದಿನ 200 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.


ಹಸ್ತಪ್ರದ ಟ್ರಸ್ಟ್ ನ ಸದಸ್ಯರು ಬರುವುದನ್ನು ಬಹು ದೂರದಿಂದಲೇ ಗುರ್ತಿಸಿ ಬಾಲ ಹೊರಳಿಸಿ ನಾಯಿಗಳು ದೈನ್ಯತೆಯಿಂದ ತಮ್ಮ ಕೃತಜ್ಞತೆ ವ್ಯಕ್ತಪಡಿಸುತ್ತವೆ ಎನ್ನುತ್ತಾರೆ ಹಸ್ತಪ್ರದ ಟ್ರಸ್ಟ್ ನ ಯುವ ಸದಸ್ಯರು.

