Sunday, June 29, 2025
spot_imgspot_img
spot_imgspot_img

ಬಂಧಿತರಾಗಿದ್ದ ‘ಸಚಿವ ಶ್ರೀರಾಮುಲು ಪಿಎ ರಾಜಣ್ಣ’ ರಿಲೀಸ್

- Advertisement -
- Advertisement -

ಬೆಂಗಳೂರು: ಹಲವರಿಂದ ವಿವಿಧ ರೀತಿಯಾಗಿ ಕೋಟಿ ಕೋಟಿ ಹಣವನ್ನು ಪಡೆದು, ವಂಚಿಸಿದ್ದ0ತ ಪ್ರಕರಣ ಸಂಬ0ಧ ನಿನ್ನೆ ಸಚಿವ ಬಿ ಶ್ರೀರಾಮುಲು ಪಿಎ ರಾಜಣ್ಣ ಅವರನ್ನು ಎಸಿಬಿಯಿಂದ ಬಂಧಿಸಲಾಗಿತ್ತು. ಇಂತಹ ಅವರನ್ನು, ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಿದಂತ ಪೊಲೀಸರು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ, ಇದೀಗ ಬಿಡುಗಡೆ ಮಾಡಿದ್ದಾರೆ.

ತಮ್ಮ ಪಿಎ ರಾಜಣ್ಣ ಅವರನ್ನು ಎಸಿಬಿ ಬಂಧಿಸಿದ್ದರಿ0ದಾಗಿ ಸಚಿವ ಬಿ ಶ್ರೀರಾಮುಲು ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಮೇಲೆ ಕೋಪ ಗೊಂಡಿದ್ದಾರೆ ಎನ್ನಲಾಗಿತ್ತು. ಇದೇ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಅವರು ತಮ್ಮನ್ನು ಭೇಟಿಯಾಗುವಂತೆ ಶ್ರೀರಾಮುಲುಗೆ ಸೂಚಿಸಿದ್ದರಿಂದ ಗೆಸ್ಟ್ ಹೌಸ್ ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು.

ಈ ವೇಳೆ ಮಾತನಾಡಿದಂತ ಅವರು, ನಾನು ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದೆ, ಯಾರು ಯಾರ ಹೆಸರನ್ನು ಕೂಡ ದುರುಪಯೋಗ ಮಾಡಿಕೊಳ್ಳಬಾರದು. ಯಾಕೆಂದ್ರೇ ರಾಜು ವಿಚಾರದಲ್ಲಿ ನನಗೆ ಗೊತ್ತಿರುವಂತ ಹುಡುಗ, ಈಗಾಗಲೇ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವಂತ ಸಂದರ್ಭದಲ್ಲಿ ಮಾತನಾಡುವುದು ಒಳ್ಳೆಯದಲ್ಲ. ಎಫ್‌ಐಆರ್ ದಾಖಲಾಗಿದೆ. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಡೆದು ಯಾರದ್ದು ತಪ್ಪು ಎನ್ನುವ ಬಗ್ಗೆ ತಿಳಿಯಲಿ. ಈ ವಿಚಾರವಾಗಿ ವಿಜಯೇಂದ್ರ ಜೊತೆಗೆ ಮಾತುಕತೆ ನಡೆಸೋದಾಗಿ ತಿಳಿಸಿದ್ದರು.

ಈ ವಿಚಾರದಲ್ಲಿ ಮಿಸ್ ಕಮ್ಯೂನಿಕೇಷನ್ ಆಗಿದೆ. ಕಾನೂನು ಪ್ರಕಾರ ನಾನು ಯಾರನ್ನು ಕಾಪಾಡುವ ಕೆಲಸ ಮಾಡೋದಿಲ್ಲ. ಈಗ ತನಿಖೆ ನಡೆಯುತ್ತಿದೆ. ತನಿಖೆ ನಡೆದು, ರಾಜು ಅವರದ್ದು ತಪ್ಪಿದ್ಯಾ ಇಲ್ಲವಾ ಅಂತ ತನಿಖೆಯಿಂದ ಹೊರ ಬರಲಿ ಎಂದಿದ್ದರು. ಇದಾಗ ಬಳಿಕ, ಎಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದಂತ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಅವರನ್ನು ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆಗೆ ಒಳಪಡಿಸಿದರು. ಇದಾದ ನಂತ್ರ, ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ, ಪೊಲೀಸರು ಬಂಧನದಿ0ದ ಬಿಡುಗಡೆ ಮಾಡಿದ್ದಾರೆ.

- Advertisement -

Related news

error: Content is protected !!