Tuesday, April 30, 2024
spot_imgspot_img
spot_imgspot_img

ವಿಟ್ಲ: ಎಸ್.ಎಲ್.ವಿ ಬುಕ್ ಏಜೇನ್ಸೀಸ್ ಇದರ ಮಾಲಕ ದಿವಾಕರ ದಾಸ್ ನೇರ್ಲಾಜೆ ಇವರಿಂದ ಪುಸ್ತಕ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ವಿಠಲ ಪ್ರೌಢ ಶಾಲೆಯ 600 ವಿದ್ಯಾರ್ಥಿಗಳಿಗೆ ಎಸ್.ಎಲ್.ವಿ ಬುಕ್ ಏಜೇನ್ಸಿಸ್ ಇದರ ಮಾಲಕ ದಿವಾಕರ ದಾಸ್ ನೇರ್ಲಾಜೆ ಅವರು ಉಚಿತ ಪುಸ್ತಕಗಳನ್ನು ವಿತರಿಸಿದರು.

ಸಾಂಕೇತಿಕವಾಗಿ ಪುಸ್ತಕ ವಿತರಿಸಿ ಮಾತನಾಡಿದ ಅವರು ಈ ಶಾಲೆ ನನಗೆ ಉತ್ತಮ ಅಡಿಪಾಯ ನೀಡಿದೆ. ಜೀವನದಲ್ಲಿ ಬದುಕುವುದನ್ನು ತಿಳಿಸಿಕೊಟ್ಟಿದೆ. ಭಗವಂತ ನಮಗೆ ಕೊಟ್ಟಿದ್ದನ್ನು ಸ್ವಲ್ಪ ಸಮಾಜಕ್ಕೆ ನೀಡುತ್ತಿದ್ದೇನೆ. ಪ್ರತಿ ವರ್ಷವೂ ಈ ಶಾಲೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ವಿಠಲ ವಿದ್ಯಾಸಂಘದ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೆ.ವಿ, ಸದಸ್ಯ ರವಿಪ್ರಕಾಶ್, ಮಹಾಬಲೇಶ್ವರ ಭಟ್, ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ವಂದಿಸಿದರು. ರಮೇಶ್ ಬಿ.ಕೆ ನಿರೂಪಿಸಿದರು. ಮೋಹನ್ ಸಹಕರಿಸಿದರು.

- Advertisement -

Related news

error: Content is protected !!