Thursday, June 18, 2026
spot_imgspot_img
spot_imgspot_img

ಆಸ್ಪತ್ರೆಗೆ ದಾಖಲಾದ ಭೂಗತ ಪಾತಕಿ ಛೋಟಾ ರಾಜನ್

- Advertisement -
- Advertisement -

ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್‌ನನ್ನು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೊಟ್ಟೆ ನೋವಿನ ಸಮಸ್ಯೆಯಿದೆ ಎಂದು ಛೋಟಾ ರಾಜನ್ ಹೇಳಿಕೊಂಡಿದ್ದರಿ0ದ ಅವರನ್ನ ಪೊಲೀಸರು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕು ಬಂದಿದ್ದ ಹಿನ್ನೆಲೆಯಲ್ಲಿ ಛೋಟಾ ರಾಜನ್?ರನ್ನ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 61 ವರ್ಷದ ರಾಜನ್ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂಡೋನೇಷಿಯಾದ ಬಾಲಿಯಿಂದ ರಾಜನ್ ನನ್ನ ಗಡಿಪಾರು ಮಾಡಲಾಗಿತ್ತು. ಇದಾದ ಬಳಿಕ ರಾಜನ್ ನನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ.

ಮುಂಬೈನಲ್ಲಿ ರಾಜನ್​ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನ ಸಿಬಿಐಗೆ ವರ್ಗಾಯಿಸಲಾಗಿತ್ತು. 2011ರಲ್ಲಿ ನಡೆದ ಪತ್ರಕರ್ತ ಜ್ಯೋತಿರ್ಮಯ್​​ ದೇ ಅವರ ಕೊಲೆ ಆರೋಪದಲ್ಲಿ ರಾಜನ್​ಗೆ 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

- Advertisement -

Related news

error: Content is protected !!