Saturday, June 28, 2025
spot_imgspot_img
spot_imgspot_img

ಉಪ್ಪಿನಂಗಡಿ: ಹಿಂದೂ ಯುವಕನ ಮೀನಿನ ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ; ಘಟನಾ ಸ್ಥಳಕ್ಕೆ ತೆರಳಿದ ಬಜರಂಗದಳ ಹಾಗೂ ವಿಹಿಂಪ ಪ್ರಮುಖರು!

- Advertisement -
- Advertisement -

ಉಪ್ಪಿನಂಗಡಿ: ರಾತ್ರೋ ರಾತ್ರಿ ಉಪ್ಪಿನಂಗಡಿ (ಹಳೇಗೇಟು) ಸುಬ್ರಹ್ಮಣ್ಯ ಕ್ರಾಸ್ ಬಳಿ ಇರುವ ಅಶೋಕ್ ಎಂಬವರ ಮೀನಿನ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಂಗಡಿ ಧ್ವಂಸಗೊಳಿಸಿದ ಘಟನೆಯಿಂದ ಅಂಗಡಿ ಭಾಗಶಃ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ಉಪ್ಪಿನಂಗಡಿ: ರಾತ್ರೋ ರಾತ್ರಿ ಮೀನಿನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು…!!

ಘಟನಾ ಸ್ಥಳಕ್ಕೆ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ ಭೇಟಿ ನೀಡಿ ಹಿಂದೂ ಯುವಕನ ಅಂಗಡಿಗೆ ಬೆಂಕಿ ಕೊಟ್ಟ ದುಷ್ಕೃತ್ಯವನ್ನು ಖಂಡಿಸಿ ಬೆಂಕಿ ಯಾರೇ ಹಚ್ಚಿರಲಿ ಅವರನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದರು ಹಾಗೂ ತುರ್ತಾಗಿ ನೂತನ ಅಂಗಡಿ ಪ್ರಾರಂಭ ಮಾಡಲು ಬೇಕಾಗುವ ವ್ಯವಸ್ಥೆ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿ ಧನ ಸಹಾಯ ಮಾಡಿದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಬಜರಂಗದಳ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಕಾರ್ಯದರ್ಶಿ ಪ್ರಸಾದ್ ಪಚ್ಚಾಡಿ, ಬಜರಂಗದಳದ ಪ್ರಮುಖರಾದ ರವಿನಂದನ್ ನೆಟ್ಟಿಬೈಲು, ಕಿಶನ್ ಕಾಂಚನ, ಜಯಂತ್ ಕುಂಜೂರುಪಂಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!