Saturday, June 28, 2025
spot_imgspot_img
spot_imgspot_img

ಉಡುಪಿ: ಅಪರಿಚಿತರು ಕಳುಹಿಸಿದ ಲಿಂಕ್ ವೊಂದನ್ನು ಕ್ಲಿಕ್ ಮಾಡಿ ಹಣ ಕಳೆದುಕೊಂಡ ವ್ಯಕ್ತಿ!

- Advertisement -
- Advertisement -

ಉಡುಪಿ: ಬ್ಯಾಂಕ್ ಗ್ರಾಹಕರೊಬ್ಬರು ಅಪರಿಚಿತರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ 65,000 ರೂ. ಕಳೆದುಕೊಂಡ ಘಟನೆ ಸೆ. 22ರ ಬುಧವಾರ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿ ಕಿದಿಯೂರಿನ ಕಾರ್ತಿಕ್‌ ರೆಸಿಡೆನ್ಸಿ ಗಿರೀಶ್‌ ಕೆ.ಸಿ (36) ಎನ್ನಲಾಗಿದೆ. ಅವರು ಉಡುಪಿ ಎಸ್ ಬಿ ಐ ಬ್ಯಾಂಕ್ ಸಾಗರ ಬ್ರಾಂಚ್‌ನಲ್ಲಿ ಖಾತೆ ಹೊಂದಿದ್ದು, ಯಾರೋ ಅಪರಿಚಿತರು ಲಿಂಕ್‌ನ್ನು ಮೇಸೆಜ್ ಮೂಲಕ ಕಳುಹಿಸಿ, ನಂತರ ಕರೆ ಮಾಡಿ ಬ್ಯಾಂಕ್‌ ಅಧಿಕಾರಿ ಮಾತನಾಡುತ್ತಿರುವುದಾಗಿ ನಂಬಿಸಿ, ಕೆವೈಸಿ ಅಪ್‌ಡೇಟ್ ಮಾಡಲು ಲಿಂಕ್‌ನ್ನು ಕ್ಲಿಕ್‌ ಮಾಡುವಂತೆ ತಿಳಿಸಿದ್ದಾರೆ.

ಬ್ಯಾಂಕ್‌ ಅಧಿಕಾರಿ ಎಂದು ನಂಬಿ ಲಿಂಕ್‌ನ್ನು ಒತ್ತಿದಾಗ ಗಿರೀಶ್ ಅವರ ಖಾತೆಯಿಂದ 3 ಸಲ ಟ್ರಾನ್ಸ್ ಕ್ಷನ್ ಮಾಡಿ 25,000, 20,000, 20,000 ದಂತೆ ಒಟ್ಟು ರೂಪಾಯಿ 65,000 ರೂ. ಹಣವನ್ನು ವಿದ್‌ಡ್ರಾ ಮಾಡಲಾಗಿದೆ. ಈ ಘಟನೆ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!