ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ(ರಿ) ಕಂದೂರು ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಸಮಿತಿ ಇದರ ಆಶ್ರಯದಲ್ಲಿ ಮಡಿವಾಳ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟವು ದಿನಾಂಕ 04 – 12-2021 ರಂದು ಕಂದೂರಿನ ಶ್ರೀ ಮಾಚಿದೇವ ಸಭಾಭವನದ ವಠಾರದಲ್ಲಿ ಜರುಗಿತು.
ಪಿ.ಸಿ ಗ್ರೂಪ್ ಮಂಗಳೂರು ಇದರ ಮುಖ್ಯ ಪ್ರಬಂಧಕರು ಆಗಿರುವ ಶ್ರೀ ಹರೀಶ್ ಕುದುಂಬ್ಲಾಡಿಯವರು ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ದ ಅಧ್ಯಕ್ಷರಾದ ಶ್ರೀ ಎನ್ ಕೆ ಶಿವ ಅಧ್ಯಕ್ಷತೆ ವಹಿಸಿದ್ದರು. ಯುವಬಳಗದ ವತಿಯಿಂದ ಎಲ್ಲಾ ಸದಸ್ಯರಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.
ಸಮಿತಿಯ ಗೌರವ ಸಲಹೆಗಾರರಾದ ಶ್ರೀ ಸೋಮಪ್ಪ ಮಾಸ್ತರ್ ರಾಯಿ , ಪುಷ್ಪರಾಜ ಕುಕ್ಕಾಜೆ , ಹರೀಶ್ ಮಂಕುಡೆ , ಮಹಿಳಾ ಸಮಿತಿ ಅಧ್ಯಕ್ಷೆ ವಿನೋದಾ ಬಿ.ಸಿ ರೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಶಾ ಪಂಜಿಕಲ್ಲು ಪ್ರಾರ್ಥಿಸಿದರು, ಯುವ ಬಳಗದ ಅಧ್ಯಕ್ಷ ದಿಲೀಪ್ ಪಂಜಿಕಲ್ಲು ಸ್ವಾಗತಿಸಿ , ಕಾರ್ಯದರ್ಶಿ ವನೀತ್ ವಂದಿಸಿ, ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.