ಧರ್ಮ ದೈವ -2 ಕಿರು ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಆಗಮಿಸಿದ ಆಹ್ವಾನಿತರ ಮನಗೆದ್ದಿದೆ. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ, ನಟ ನಿರ್ದೇಶಕ ಶಿವಧ್ವಜ್ ಶೆಟ್ಟಿ,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹಾಗು ಮಹೇಶ್ ಮೋಟರ್ಸ್ ಮಾಲೀಕರಾದ ಜಯರಾಮ್ ಶೇಖ ಅವರು ವಿಶೇಷ ಆಹ್ವಾನಿತಾರಾಗಿ ಆಗಮಿಸಿದ್ದರು.
ಮೊದಲ ಪ್ರದರ್ಶನದಲ್ಲಿ ಧರ್ಮ ದೈವ -2 ಚಿತ್ರ ಎಲ್ಲರ ಮನ ಗೆದ್ದಿದ್ದು ಕಥೆ, ನಿರ್ದೇಶನ, ತಾಂತ್ರಿಕ ಕೆಲಸ ಹಾಗು ಕಲಾವಿದರ ನಟನೆ ಎಲ್ಲರ ಮೆಚ್ಚುಗೆ ಗಳಿಸಿದೆ. ಕಾರ್ಯಕ್ರಮದಲ್ಲಿ ದೈವ ನರ್ತಕರಾದ ಶೇಷಪ್ಪ ಪರವ ಹಾಗು ಅಂತಾರಾಷ್ಟ್ರೀಯ ಕ್ರೀಡಾಪಟು ಸುಬಶ್ಚಂದ್ರ ರೈ ತೋಟ ಅವರನ್ನು ಗೌರವಿಸಲಾಯಿತು.
ಪ್ರೀಮಿಯರ್ ಪ್ರದರ್ಶನದ ನಂತರ ಆಗಮಿಸಿದ ಗಣ್ಯರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ.ಮುಂದಿನ ಯುವ ಸಮುದಾಯಕ್ಕೆ ನಮ್ಮ ದೈವಗಳ ಕಾರ್ಣಿಕ ತಿಳಿಸುವ ಇಂತಹ ಚಿತ್ರಗಳ ಅಗತ್ಯ ಇದೆ ಎಂದು ಹೇಳಿದರು.
ಚಿತ್ರ ಇದೆ ಡಿಸೆಂಬರ್ 30 ರಂದು ಸಂಜೆ 5.58 ಕ್ಕೆ ಟಾಕೀಸ್ ಆಪ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಯಾಗಲಿದೆ.