- Advertisement -
- Advertisement -


ಸುಬ್ರಹ್ಮಣ್ಯದ ಪ್ರೌಢಶಾಲೆಯೊಂದರ ಶಿಕ್ಷಕ ಅದೇ ಶಾಲೆಯ ವಿದ್ಯಾರ್ಥಿನಿಯನ್ನು ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನವಾಗಿದ್ದ. ಆದರೆ ಒಂದೇ ದಿನದಲ್ಲಿ ಬಂಧನ ಮುಕ್ತಗೊಳಿಸಿದ ನ್ಯಾಯಾಲಯದ ಆದೇಶದ ವಿರುದ್ಧ ಸಂತ್ರಸ್ಥೆಯ ತಾಯಿ ಬೆಂಗಳೂರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿ ಗುರುರಾಜ್ ನನ್ನು ತಕ್ಷಣ ಬಂಧಿಸುವಂತೆ ವಾರೆಂಟ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ವಿದ್ಯಾರ್ಥಿನಿಯ ತಾಯಿಯ ದೂರಿನಂತೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಲು ಪುತ್ತೂರಿನ ವಕೀಲರಾದ ನರಸಿಂಹ ಪೈ ಹಾಗೂ ಹೈಕೋರ್ಟ್ ನಲ್ಲಿ ಸಚಿನ್ ಬಿ ಎಸ್ ವಾದ ಮಂಡಿಸಿದ್ದಾರೆ.


- Advertisement -