Sunday, June 29, 2025
spot_imgspot_img
spot_imgspot_img

ಪುತ್ತೂರು: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ, ಜೀವ ಬೆದರಿಕೆ

- Advertisement -
- Advertisement -

ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಬೆದರಿಕೆಯೊಡ್ಡಿ ಪರಾರಿಯಾದ ಘಟನೆ ತಿಂಗಳಾಡಿಯಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಗುತ್ತುಮನೆ ನಿವಾಸಿ ನಿಶಾಂತ್ ಎಂಬವರು ಮಾ. 12ರಂದು ತಿಂಗಳಾಡಿ ಜಂಕ್ಷನ್ ನಲ್ಲಿ ನಿಂತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಬೂಬಕ್ಕರ್ ಹಾಗೂ ಖಾಸಿಂ ಎಂಬವರು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಗಳು ನಿಶಾಂತ್‌ ಅವರಿಗೆ ಅವಾಬ್ಯ ಶಬ್ಧಗಳಿಂದ ಬೈಯುವುದನ್ನು ಸ್ಥಳದಲ್ಲಿದ್ದ ಸುದಿನ್, ದಿನೇಶ್, ಹರೀಶ್, ನಿಕ್ಕಿತ್, ನಿತೇಶ್ ಹಾಗೂ ಪ್ರತೀಕ್ ಎಂಬವರು ಗಮನಿಸಿದ್ದಾರೆ. ನಂತರ ವಿಚಾರಿಸಲೆಂದು ಬಂದಾಗ ದ್ವಿಚಕ್ರ ವಾಹನದಲ್ಲಿ ಬಂದ ಅಬೂಬಕ್ಕರ್ ಹಾಗೂ ಖಾಸಿಂ ಎಂಬವರು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ನಿಶಾಂತ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!