- Advertisement -
- Advertisement -
ಬೆಂಗಳೂರು : ರಾಜಾಜಿನಗರದ ಸಿದ್ಧಗಂಗಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹೊಸ ಅವಾಂತರ ಸೃಷ್ಠಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷಾ ಕೊಠಡಿಗೆ ಹಿಜಾಬ್ ರೀತಿಯಲ್ಲಿ ದುಪ್ಪಟ್ಟಾ, ಟೋಪಿ ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಸಿಬ್ಬಂದಿ ವರ್ಗ ತಡೆದು ದುಪ್ಪಟಾ ತೆಗೆಸಿದ ಘಟನೆ ನಡೆದಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಕೆಲ ಸಿಬ್ಬಂದಿಗಳೂ ಕೂಡಾ ಹಿಜಾಬ್ ಧರಿಸಿ ಬಂದಿರುವುದನ್ನು ಕಂಡ ಆಡಳಿತ ಮಂಡಳಿ ಹಿಜಾಬ್ ತೆಗಿವಂತೆ ಹೇಳಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಲಿದ್ದು – ಇಂದು ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳು 8,73,846. ವಿದ್ಯಾರ್ಥಿಗಳು 4,52,732, ವಿದ್ಯಾರ್ಥಿನಿಯರು 4,21,110.
ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಶಾಲೆಗಳು 15,387 – ರಾಜ್ಯದಲ್ಲಿ ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ 3,444 ನಡೆಯಲಿದೆ.
- Advertisement -