ಆರೋಪಿ ಕಾರ್ಕಳದ ವಸಂತ ಪೊಲೀಸ್ ತನಿಖೆ ವೇಳೆ ಹೇಳಿದ್ದೇನು.?
ಮಂಗಳೂರು.:- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 19-08-20ರಂದು ಮಧ್ಯಾಹ್ನ 1.05ರ ಸಮಯಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಬಂದಿಸಲಾಗಿದೆ.ಆರೋಪಿ ವಸಂತ ಶೇರಿಗಾರು (33) ಬಂಧಿತ ವ್ಯಕ್ತಿ.ಪೊಯ್ಯದಲ್ ಬಲ್ಲಾಡಿ ಮನೆ ,ಕಾರ್ಕಳ ತಾಲೂಕಿನ ಉಡುಪಿ ಜಿಲ್ಲೆಯವನು.
ಜನವರಿಯಲ್ಲಿ ಆದಿತ್ಯ ರಾವ್ ಎನ್ನುವ ವ್ಯಕ್ತಿಯ ಬೆದರಿಕೆ ಕರೆಮಾಡಿ ಭಾರೀ ಪ್ರಚಾರ ಗಿಟ್ಟಿಸಿದ್ದ ಹಿನ್ನಲೆಯಲ್ಲಿ ಹಾಗೂ ಈತನು ಗೂಗಲ್ ಮೂಲಕ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಈ ಕರೆ ಮಾಡಿರುವುದಾಗಿದೆ. ಆರೋಪಿಯು ಪ್ರಚಾರ ಗಿಟ್ಟಿಸುವುದಕ್ಕಾಗಿ ಬೆದರಿಕೆ ಕರೆ ಮಾಡಿದೆ ಎಂದು ಪೊಲೀಸ್ ರಲ್ಲಿ ವಿಚಾರಣೆಯಲ್ಲಿ ತಿಳಿಸಿರುತ್ತಾನೆ..ಇತನ ಮೇಲೆ “ವಿಮಾನ ನಿಲ್ದಾಣಕ್ಕೆ ಬೆದರಿಕೆ ಹಾಗೂ ಇತರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಎಂದು ಮಂಗಳೂರು ಪೋಲೀಸ್ ಕಮಿಷನರ್ ವಿಕಾಶ್ ಕುಮಾರ್ ವಿಕಾಶ್ ಮಾಹಿತಿ ನೀಡಿದ್ದಾರೆ. ಈ ಪ್ರಕರಣವನ್ನು ಅದೇ ದಿನ ಬೇಧಿಸುವಲ್ಲಿ ಮಂಗಳೂರು ನಗರ ಪೊಲೀಸ ರು ಯಶಸ್ವಿಯಾಗಿರುತ್ತಾರೆ.